More

    ವಿಜಯದ ಕೂಗು ದಿಲ್ಲಿಗೆ ತಲುಪಿಸೋಣ

    ಹಿರೇಬಾಗೇವಾಡಿ : ಸತೀಶ ಜಾರಕಿಹೊಳಿ ಅವರನ್ನು ಗೆಲ್ಲಿಸುವ ಮೂಲಕ ನಮ್ಮೆಲ್ಲರ ವಿಜಯದ ಕೂಗನ್ನು ದಿಲ್ಲಿಯವರೆಗೆ ತಲುಪಿಸೋಣ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದರು.

    ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಶಿವಾಲಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜರುಗಿದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಡವರ, ಶ್ರಮಿಕರ ಹಾಗೂ ನಿರ್ಗತಿಕರ ಪಕ್ಷವಾದ ಕಾಂಗ್ರೆಸ್‌ಗೆ ನೂರಾರು ವರ್ಷಗಳ ಇತಿಹಾಸವಿದೆ.

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ದೇಶದಲ್ಲಿ ಎಲ್ಲ ಬಗೆಯ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಅಲ್ಲದೆ, ಹಲವಾರು ದಿಟ್ಟ ನಾಯಕರನ್ನು ಪಕ್ಷ ಹೊಂದಿದೆ. ಅದರಲ್ಲಿ ಸತೀಶ ಜಾರಕಿಹೊಳಿ ಅವರೂ ರಾಜ್ಯದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಘನತೆ, ಗೌರವಗಳೊಂದಿಗೆ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಿ ಸಾವಿರಾರು ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಇಂತಹ ವ್ಯಕ್ತಿಯನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. ಸುರೇಶ ಇಟಗಿ, ಬಿ.ಜಿ.ವಾಲಿಇಟಗಿ, ರಾಜು ಮೇಳೇದ ಮಾತನಾಡಿದರು. ತಾಪಂ ಸದಸ್ಯೆ ಗೌರವ್ವ ಪಾಟೀಲ, ಬ್ಲಾಕ್ ಅಧ್ಯಕ್ಷ ಸಿ.ಸಿ. ಪಾಟೀಲ, ಗ್ರಾಪಂ ಅಧ್ಯಕ್ಷೆ ಸ್ವಾತಿ ಇಟಗಿ, ಉಪಾಧ್ಯಕ್ಷೆ ನಾಜರೀನಬಾನು ಕರಿದಾವಲ್, ಗ್ರಾಪಂ ಸದಸ್ಯರಾದ ಗೌಸಮೋದ್ದೀನ್ ಜಾಲಿಕೊಪ್ಪ, ಸದ್ದಾಂ ನದ್ಾ, ಅನಂದಗೌಡ ಪಾಟೀಲ,
    ಶ್ರೀಕಾಂತ ಮಾಧುಬರಮಣ್ಣವರ ಹಾಗೂ ಬಸಾಪುರ, ಅರಳೀಕಟ್ಟಿ, ಹಿರೇಬಾಗೇವಾಡಿ, ಮುತ್ನಾಳ, ವಿರಪನಕೊಪ್ಪ, ಭೆಂಡಿಗೇರಿ, ಕುಕಡೊಳ್ಳಿ, ಗಜಪತಿ, ಬಡಸ್, ಅಂಕಲಗಿ, ಹುಲಿಕವಿ ಗ್ರಾಮಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts