ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರ ತನಕ ನಡೆಸುವುದಕ್ಕೆ ಕ್ಯಾಬಿನೆಟ್ ಕಮಿಟಿ ಶಿಫಾರಸು ಮಾಡಿದೆ. ಈ ಅಧಿವೇಶದಲ್ಲಿ ಒಟ್ಟು 18 ಕಲಾಪಗಳು ನಡೆಯಲಿದ್ದು, ಕಲಾಪ ದಿನಾಂಕಗಳ ಪಟ್ಟಿ ನಂತರದಲ್ಲಿ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ -19 ಸೋಂಕಿನ ಕಾರಣಕ್ಕೆ ಸಂಸತ್ತಿನ ಮುಂಗಾರು ಅಧಿವೇಶನ ಹಲವು ಪ್ರಥಮಗಳಿಗೆ ಕಾರಣವಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಲೋಕಸಭೆ, ರಾಜ್ಯಸಭೆಗಳ ಚೇಂಬರ್, ಗ್ಯಾಲರಿಯ ಪೂರ್ಣ ಪ್ರಮಾಣದ ಬಳಕೆ ಈ ಬಾರಿ ಸದಸ್ಯರಿಗೇ ಮೀಸಲಾಗಿ ಇರಲಿದೆ.
ಇದನ್ನೂ ಓದಿ: ಉಪ್ಪಿನಕಾಯಿ ಜಾರೂ ಹೋಯ್ತು, 81,000 ರೂಪಾಯಿನೂ ಹೋಯ್ತು!
ರಾಜ್ಯಸಭಾ ಸಚಿವಾಲಯದ ಮಾಹಿತಿ ಪ್ರಕಾರ, ಮೇಲ್ಮನೆಯ ಎರಡೂ ಚೇಂಬರ್ಗಳಲ್ಲಿ ಮತ್ತು ಗ್ಯಾಲರಿಗಳಲ್ಲಿ ಸದಸ್ಯರು ಕೂರಲಿದ್ದಾರೆ. ಭಾರತದ ಸಂಸತ್ ಇತಿಹಾಸದಲ್ಲಿ 1952ರ ನಂತರ ಇಂತಹ ಕ್ರಮ ಇದೇ ಮೊದಲ ಬಾರಿ ತೆಗೆದುಕೊಳ್ಳಲಾಗಿದೆ. ಇದರಂತೆ, ಚೇಂಬರ್ನಲ್ಲಿ 60 ಸದಸ್ಯರು, ಗ್ಯಾಲರಿಯಲ್ಲಿ 51 ಸದಸ್ಯರು ಕುಳಿತರೆ, ಉಳಿದ 132 ಸದಸ್ಯರು ಲೋಕಸಭೆಯ ಚೇಂಬರ್ನಲ್ಲಿ ಕುಳಿತುಕೊಳ್ಳಲಿದ್ದಾರೆ. ಲೋಕಸಭೆ ಕಲಾಪಕ್ಕೂ ಇಂಥದ್ದೇ ಉಪಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. (ಏಜೆನ್ಸೀಸ್)
ಪಕ್ಕದ ರಾಜ್ಯದವರು ಓಕೆ ಅಂದ್ರೆ ಕೂಡ್ಲೇ ಬಸ್ ಬಿಡ್ತೇವೆ- ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ