ಪರಶುರಾಮಪುರ: ಸಂಘ ಸಂಸ್ಥೆಗಳು ಸರ್ಕಾರದ ನೆರವು ಪಡೆದು ಜನಸೇವೆಗೆ ಮುಂದಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ವಿಡಪನಕುಂಟೆ ಗ್ರಾಮದಲ್ಲಿ 5 ಲಕ್ಷ ರೂ. ವೆಚ್ಚದ ಮುಸ್ಲಿಂ ಸಮಾಜದ ಸ್ಮಶಾನ ಭೂಮಿ ಸುತ್ತಲಿನ ಕಾಂಪೌಂಡ್ ನಿರ್ಮಾಣಕ್ಕೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರಸಭೆ ಸದಸ್ಯರಾದ ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ, ಎಂ.ಜೆ.ರಾಘವೇಂದ್ರ, ರಮೇಶ್ಗೌಡ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಆಂಜನೇಯ, ಜಿ.ವೀರೇಶ್, ಅನ್ವರ್ ಮಾಸ್ಟರ್, ದಾದಾಪೀರ್, ಮೂರ್ತಿ, ಮಲ್ಲಿಕಾರ್ಜುನ, ರಾಜಶೇಖರಪ್ಪ, ರೆಡ್ಡಿಹಳ್ಳಿ ಶಿವಣ್ಣ ಇತರರಿದ್ದರು.