More

    ಪಂಚಮಸಾಲಿ ಮೀಸಲಾತಿಗಾಗಿ ಈಗ ಮೈಕ್ ಹಿಡಿದವರು ಹಿಂದೆ ಎಲ್ಲಿದ್ದರು: ನಿರಾಣಿ ಪ್ರಶ್ನೆ

    ಬೆಳಗಾವಿ: ‘‘ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ಸ್ಥಾನಮಾನ ಸಿಗಲೇಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಒಂದು ದಶಕಕ್ಕಿಂತ ಹೆಚ್ಚು ಕಾಲದಿಂದಲೂ ನಾನು ಬೆಂಬಲ ನೀಡುತ್ತಿದ್ದೇನೆ. ಇದೀಗ ಬಂದವರು ದಿನವೂ ಮೈಕ್ ಹಿಡಿಯುತ್ತಿದ್ದಾರೆ. ಅಂದು ಇವರೆಲ್ಲ ಎಲ್ಲಿದ್ದರು?’’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಪ್ರಶ್ನಿಸಿದ್ದಾರೆ.

    ‘‘ಹರಿಹರ ಮತ್ತು ಕೂಡಲ ಸಂಗಮ ಪೀಠಗಳ ಸ್ವಾಮೀಜಿಗಳು ಪಂಚಮಸಾಲಿ ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ. ಮೀಸಲಾತಿ ವಿಚಾರವಾಗಿ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಗಳು ಹೋರಾಟ ನಿಲ್ಲಿಸಿ, ಸರ್ಕಾರದೊಂದಿಗೆ ಮಾತುಕತೆಗೆ ಬರಬೇಕು. 2ಎ ವರ್ಗಕ್ಕೆ ಸೇರಿಸಿದರೆ ಇನ್ನುಳಿದ ವರ್ಗಗಳಲ್ಲಿ ಆಗುವ ಸಾಧಕ-ಬಾಧಕಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ಕಾನೂನಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳುವವರೆಗೂ ತಾಳ್ಮೆಯಿಂದ ಇರಬೇಕು’’ ಎಂದು ಸುದ್ದಿಗೋಷ್ಠಿಯಲ್ಲಿ ನಿರಾಣಿ ಸಲಹೆ ನೀಡಿದರು.

    ಮಗುವಿನ ಸಾಕ್ಷಿ ಸರಿ ಇಲ್ಲದಿದ್ದರೇನು… ತಾಯಿಯ ಮಾತು ಕೇಳಿ ಎಂದ ಹೈಕೋರ್ಟ್

    ವೃದ್ಧರನ್ನು ಟ್ರಕ್​ನಿಂದ ತಳ್ಳುತ್ತಿರುವ ಅಧಿಕಾರಿ! ಭಯಾನಕ ವಿಡಿಯೋ ವೈರಲ್- ಉಪ ಆಯುಕ್ತ ಸಸ್ಪೆಂಡ್​

    ಬಳ್ಳಾರಿಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರ ಸಾಮರಸ್ಯ ಪಾದಯಾತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts