More

    ಬಾಬರ್​ಗೆ ಕೇಸರಿ ಶಾಲು ಹೊದಿಸಿ ಅದ್ಧೂರಿ ಸ್ವಾಗತ : 7ವರ್ಷದ ನಂತರ ಭಾರತಕ್ಕೆ ಪಾಕ್​ ಕ್ರಿಕೆಟ್​ ತಂಡ

    ಹೈದರಾಬಾದ್​: ಐಸಿಸಿ ಏಕದಿನ ವಿಶ್ವಕಪ್ 2023 ಪಂದ್ಯಗಳಲ್ಲಿ ಭಾಗವಹಿಸುವ ಸಲುವಾಗಿ ಬಾಬರ್​ ಅಝಮ್ ನೇತೃತ್ವದ 15ಮಂದಿ ಆಟಗಾರರ ಪಾಕಿಸ್ತಾನ್​ ಕ್ರಿಕೆಟ್​ ತಂಡ ಬುಧವಾರ ರಾತ್ರಿ ಹೈದರಾಬಾದ್​ ಸೇರಿಕೊಂಡಿತು. 7ವರ್ಷದ ಬಳಿಕ ಭಾರತದ ನೆಲದ ಮೇಲೆ ಪಾಕ್​ ತಂಡ ಆಟವಾಡಲು ಪಾದಾರ್ಪಣೆ ಮಾಡಿರುವುದು ವಿಶೇಷ.

    ಅ. 5 ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಬಾಬರ್ ಅಝಮ್ ನಾಯಕತ್ವದ ತಂಡ ಬುಧವಾರ ರಾತ್ರಿ 8 ಗಂಟೆಗೆ ಹೈದರಾಬಾದ್‌ಗೆ ವಿಮಾನದ ಮೂಲಕ ತಲುಪಿತು. ಭಾರತದ ಅಧಿಕಾರಿಗಳು ಮೆನ್ ಇನ್ ಗ್ರೀನ್ ಎಂದೇ ಕರೆಯುವ ಬಾಬರ್​ ತಂಡಕ್ಕೆ ಹೂಗುಚ್ಛ ನೀಡಿ, ಕೇಸರಿ ಶಾಲು ಹೊದಿಸಿ ಸ್ವಾಗತಿಸಿದರು.

     ಇದನ್ನೂ ಓದಿ:  ತುಂಬಾ ರೇಗಿಸುತ್ತಿದ್ದ ಅಂತ ಸ್ನೇಹಿತನ ಪ್ರಾಣವನ್ನೇ ತೆಗೆದ ಯುವಕ

    ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನವು ಅಕ್ಟೋಬರ್ 6 ರಂದು ಹೈದರಾಬಾದ್‌ನಲ್ಲಿ ನೆದರ್​ಲೆಂಡ್ಸ್ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಕದನ ಅ. 14 ರಂದು ಅಹ್ಮದಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಅ.10 ರಂದು ಶ್ರೀಲಂಕಾ ವಿರುದ್ಧ ಬಾಬರ್ ತಂಡ ಹೈದರಾಬಾದ್‌ನಲ್ಲಿ ಮತ್ತೊಂದು ಪಂದ್ಯವನ್ನು ಆಡಲಿದೆ.

    ಮಣಿಪುರ ಹಿಂಸಾಚಾರ: ಇಂಫಾಲದಲ್ಲಿ ಮತ್ತೆ ಹಿಂಸಾತ್ಮಕ ಪ್ರತಿಭಟನೆ, ಡಿಸಿ ಕಚೇರಿ ಧ್ವಂಸ; ಎರಡು ವಾಹನಗಳಿಗೆ ಬೆಂಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts