More

    ಗಡಿಯಲ್ಲಿ ಸೇನೆಯ ದೀಪಾವಳಿ; ಪಾಕಿಸ್ತಾನದ ಬಂಕರ್​, ಲಾಂಚ್​ ಪ್ಯಾಡ್​ಗಳು ಪುಡಿಪುಡಿ

    ಶ್ರೀನಗರ: ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ದಾಳಿ ನಡೆಸಿ, ನಾಲ್ವರು ಯೋಧರು ಮತ್ತು ಮೂವರು ನಾಗರಿಕರನ್ನು ಹತ್ಯೆ ಮಾಡಿರುವ ಪಾಕಿಸ್ತಾನಿ ಸೇನೆಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. ಗಡಿ ನಿಯಂತ್ರಣ ರೇಖೆ ಬಳಿಯಲ್ಲಿರುವ ಪಾಕಿಸ್ತಾನಿ ಬಂಕರ್​ಗಳು ಮತ್ತು ಅಲ್ಲಿನ ಲಾಂಚ್​ ಪ್ಯಾಡ್​ಗಳನ್ನು ಸೇನೆ ಹೊಡೆದುರುಳಿಸಿದೆ.

    ಇದನ್ನೂ ಓದಿ: ವಿದ್ಯುತ್ ಬರ ನೀಗಿ ಬೇರೆ ರಾಜ್ಯಗಳಿಗೂ ಸರಬರಾಜು ಮಾಡುವ ಸಾಮರ್ಥ್ಯ ನಮ್ಮ ರಾಜ್ಯಕ್ಕಿದೆ

    ಜಮ್ಮು ಕಾಶ್ಮೀರದ ಬಾರಾಮುಲ್ಲಾ, ಕುಪ್ವಾರ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಉರಿ, ನೌಗಾಂವ್​, ತಂಗ್ಧರ್​, ಕೆರನ್​ ಮತ್ತು ಗುರೆಜ್​ನಾದ್ಯಂತ ಹರಡಿರುವ ಪಾಕಿಸ್ತಾನಿ ಬಂಕರ್​ಗಳನ್ನು ಸೇನೆ ಕ್ಷಿಪಣಿಗಳ ಮೂಲಕ ಹೊಡೆದುರುಳಿಸಿದೆ. ಜತೆಯಲ್ಲಿ ಕೆಲವು ಲಾಂಚ್​ ಪ್ಯಾಡ್​ಗಳನ್ನು ಕ್ಷಿಪಣಿಗಳ ಮೂಲಕ ಧ್ವಂಸಗೊಳಿಸಲಾಗಿದೆ. ಇದರ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಕನಿಷ್ಠ 7-8 ಪಾಕ್​ ಸೈನಿಕರು ಮೃತರಾಗಿದ್ದಾರೆ. 10ಕ್ಕೂ ಅಧಿಕ ಯೋಧರು ಗಾಯಾಳುಗಳಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಚಿನ್ನಾಭರಣ ದೋಚುತ್ತಿದ್ದ ಗ್ಯಾಂಗ್ ಕುರಿ, ಮೇಕೆಯನ್ನೂ ಬಿಡ್ತಿರಲಿಲ್ಲ!

    ಇದಕ್ಕೂ ಮೊದಲು ಪಾಕಿಸ್ತಾನ ಅನೇಕ ಸ್ಥಳಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ತನ್ನ ಅಟ್ಟಹಾಸ ಮೆರೆದಿತ್ತು. ಬಾರಾಮುಲ್ಲಾ ಜಿಲ್ಲೆಯ ನಾಂಬಲ ಸೆಕ್ಟರ್​ನಲ್ಲಿ ಇಬ್ಬರು ಯೋಧರನ್ನು ಹತ್ಯೆ ಮಾಡಿತ್ತು. ಬಿಎಸ್​ಎಫ್​ನ ಜವಾನ್​ ಒಬ್ಬರನ್ನು ಹತ್ಯೆ ಮಾಡಲಾಗಿತ್ತು. ಒಟ್ಟು ನಾಲ್ವರು ಯೋಧರು ಮತ್ತು ಮೂವರು ನಾಗರಿಕರು ಪಾಕ್​ ಸೇನೆಯಿಂದಾಗಿ ಹುತಾತ್ಮರಾಗಿದ್ದರು. (ಏಜೆನ್ಸೀಸ್​)

    ರೋಹಿತ್​ ಆರ್​ಸಿಬಿಯ ನಾಯಕನಾಗಿದ್ದರೆ ಹೀಗೇ ಗೆಲ್ಲುತ್ತಿದ್ದರಾ? ಗೌತಮ್​ ಗಂಭೀರ್​ಗೆ ಆಕಾಶ್​ ಛೋಪ್ರಾ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts