More

    ಇಮ್ರಾನ್​ ಖಾನ್​ಗೆ ಗುಂಡು ತಗುಲಿದ್ದಕ್ಕೆ ಪೊಲೀಸ್​ ಟ್ಯಾಂಕ್​ಗೇ ಮುತ್ತಿಗೆ ಹಾಕಿದ ಪಾಕ್​ ಜನರು!

    ಪೇಶಾವರ್​: ಇತ್ತೀಚೆಗೆ ಪಾಕಿಸ್ತಾನ, ರಾಜಕೀಯ ಪ್ರೇರಿತ ಕೊಲೆ ಪ್ರಯತ್ನ ವಿಷಯದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಇದೀಗ ಇಮ್ರಾನ್​ ಖಾನ್​ ಕೊಲೆ ಪ್ರಯತ್ನ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಇದರಿಂದ ರೊಚ್ಚಿಗೆದ್ದ ಜನರು ಸೇನೆಯ ಟ್ಯಾಂಕ್​ ಒಂದನ್ನು ಸುತ್ತುವರಿದು ಅದನ್ನು ನಾಶ ಮಾಡಲು ಪ್ರಯತ್ನಿಸಿದ್ದಾರೆ.

    ಅ.23ರಂದು ಪಾಕ್​ ಸೇನೆಯ ವಿರುದ್ಧ ದನಿ ಎತ್ತಿದ್ದ ಪಾಕ್​ ಪತ್ರಕರ್ತನನ್ನು ಕೀನ್ಯಾದಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಆ ಸಂದರ್ಭದಲ್ಲಿ ಇಮ್ರಾನ್​ ಖಾನ್​ ಪಾಕ್​ ಸೇನೆಯ ವಿರುದ್ಧ ಕ್ಯಾಮರಾ ಮುಂದೆಯೇ ವಾಗ್ದಾಳಿ ನಡೆಸಿದ್ದರು. ಈಗ ಹಕೀಕಿ ಆಝಾದಿ ಹೆಸರಿನ ರ್‍ಯಾಲಿ ಮೂಲಕ ಸರ್ಕಾರದ ವಿರುದ್ಧ ಯಾತ್ರೆ ನಡೆಸುತ್ತಿದ್ದಾರೆ. ನಿನ್ನೆ (ನ.3) ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ ನಡೆದ ನಂತರ ಪಾಕಿಸ್ತಾನದಲ್ಲಿ ಜನರು ಬೀದಿಗಿಳಿದಿದ್ದಾರೆ. ಈ ಸಂದರ್ಭ ಪ್ರತಿಭಟನಾಕಾರರು ಪೊಲೀಸ್​ ಟ್ಯಾಂಕ್​ಗೆ ಮುತ್ತಿಗೆ ಹಾಕಿದ್ದಾರೆ.

    ಇದರ ವಿಡಿಯೋವನ್ನು ಪಾಕ್​ನ ವಜಾಹತ್​ ಖಾನ್​ ಎನ್ನುವ ಪತ್ರಕರ್ತ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್​ನಲ್ಲಿ ‘ಇಮ್ರಾನ್ ಖಾನ್ ಮೇಲಿನ ದಾಳಿಯ ನಂತರ ಕೋಪಗೊಂಡ ಪ್ರತಿಭಟನಾಕಾರರು ಪೇಶಾವರ ಮತ್ತು ಇತರ ಹಲವು ನಗರಗಳಲ್ಲಿ ಮಿಲಿಟರಿಯ ಶಕ್ತಿಯ ಸಂಕೇತವಾದ ಪಾಕಿಸ್ತಾನದ ಪೊಲೀಸ್​ ಟ್ಯಾಂಕ್ ಅನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದಾರೆ. 75 ವರ್ಷಗಳ ಇತಿಹಾಸದಲ್ಲಿ ಈ ರೀತಿಯ ಘಟನೆ ಪಾಕ್‌ನಲ್ಲಿ ನಡೆದಿಲ್ಲ’ ಎಂದು ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts