ಮುನ್ನಾರ್: ಚಿರತೆಯನ್ನು ಕೊಂದ ಆರೋಪದಲ್ಲಿ 34 ವರ್ಷದ ವ್ಯಕ್ತಿಯನ್ನು ಕೇರಳದ ಮುನ್ನಾರ್ನಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಕುಮಾರ್ ಎಂದು ಗುರುತಿಸಲಾಗಿದೆ.
ವರ್ಷಗಳ ಹಿಂದೆ ತನ್ನ ಹಸುವನ್ನು ಬೇಟೆಯಾಡಿ ಕೊಂದಿದ್ದಕ್ಕೆ ಪ್ರತಿಕಾರವಾಗಿ ಚಿರತೆಯನ್ನು ಕುಮಾರ್ ಬೇಟೆಯಾಡಿದ್ದಾನೆಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 8ರಂದು ಈ ಘಟನೆ ನಡೆದಿದ್ದು, ನಾಲ್ಕು ವರ್ಷದ ಚಿರತೆಯನ್ನು ಕನ್ನಿಮಾಲಾ ಎಸ್ಟೇಟ್ನ ಕೆಳಭಾಗದಲ್ಲಿ ಬೇಟೆಯಾಡಲಾಗಿದೆ.
ಇದನ್ನೂ ಓದಿ: ‘ಗೂಗಲ್’ನಲ್ಲಿ ಇದೇನಿದು ಪೇಟಿಎಂ ‘ಪ್ಲೇ’? ಇಲ್ಲ ಎಂದ ಕೆಲವೇ ಗಂಟೆಗಳಲ್ಲೇ ಇದೆ!
ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಹಸು ಕೊಂದ ಪ್ರತಿಕಾರಕ್ಕಾಗಿ ಚಿರತೆ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹಗಲಿನ ವೇಳೆಯಲ್ಲೇ ಹಸುವಿನ ಮೇಲೆ ದಾಳಿ ಮಾಡಿ ಚಿರತೆ ಕೊಂದು ಹಾಕಿತ್ತು. ಈ ಹಸು ಕುಮಾರ್ ಜೀವನದ ಆಧಾರವಾಗಿತ್ತು. ಹೀಗಾಗಿ ಸೇಡು ತೀರಿಸಿಕೊಂಡಿದ್ದಾನೆ.
ಚಿರತೆಯನ್ನು ಕೊಂದಿದ್ದು ಹೇಗೆ?
ಚಿರತೆಯು ಸಾಮಾನ್ಯವಾಗಿ ಓಡಾಡುತ್ತಿದ್ದ ಏರಿಯಾದಲ್ಲಿ ಕುಮಾರ್ ಬಲೆಯನ್ನು ಅಳವಡಿಸಿದ್ದ. ಆಗಾಗ ಬಲೆಯನ್ನು ಪರಿಶೀಲಿಸುತ್ತಿದ್ದ. ಕೊನೆಗೊಂದು ದಿನ ಬಲೆಗೆ ಬಿದ್ದ ಚಿರತೆಯನ್ನು ಕುಮಾರ್ ಚಾಕುವಿನಿಂದ ತಿವಿದು ಕೊಂದು ಹಾಕಿದ್ದಾನೆಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಪ್ರಧಾನಿ ಮೋದಿ ಬರ್ತಡೇ ಆಚರಿಸಲು 24 ಗಂಟೆ ಯೂಟ್ಯೂಬ್ ನೇರಪ್ರಸಾರ: ಅಭಿಮಾನಿ ಹೇಳಿದ್ದೇನು?