ಲಖನೌ: ಉತ್ತರ ಪ್ರದೇಶದ ಬಿಜೆಪಿ ನಾಯಕರು ತಮ್ಮ ಎದುರಾಳಿಯಾದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನೂ ತಮ್ಮ ಸರ್ಕಾರದ ಪರ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಜಾಣ್ಮೆಯ ಕಾರ್ಯಕ್ಕೆ ರಾಜಕೀಯದ ಮಾಸ್ಟರ್ ಸ್ಟ್ರೋಕ್ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಯುಪಿಯ ಹಣಕಾಸು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಖನ್ನ ಅವರು, ವೈದ್ಯಕೀಯ ಸಿಬ್ಬಂದಿಯೊಬ್ಬರು ಅಖಿಲೇಶ್ ಯಾದವ್ ಅವರ ಕರೊನಾ ಪರೀಕ್ಷೆ ಮಾಡುತ್ತಿರುವ ಚಿತ್ರ ಹೊಂದಿರುವ ಪೋಸ್ಟರ್ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ, “ಯೋಗಿ ಸರ್ಕಾರದಲ್ಲಿ ಪ್ರತಿ ನಾಗರೀಕನಿಗೂ ಆರೋಗ್ಯ ಸೌಲಭ್ಯಗಳ ಲಾಭ ದೊರೆಯುತ್ತಿದೆ” ಎಂದು ಟಿಪ್ಪಣಿ ಬರೆದಿದ್ದಾರೆ.
योगी सरकार में हर नागरिक को मिल रहा स्वास्थ्य सुविधाओं का लाभ। pic.twitter.com/pjyNGW6yxZ
— सुरेश कुमार खन्ना (@SureshKKhanna) October 20, 2021
ಯುಪಿ ನಂ.1 ಎಂಬ ಶೀರ್ಷಿಕಯಡಿ ಅಖಿಲೇಶ್ ಯಾದವ್ರ ಚಿತ್ರ ಹೊಂದಿದ ಈ ಪೋಸ್ಟರ್ನಲ್ಲಿ, ಉತ್ತರಪ್ರದೇಶವು, 8.17 ಕೋಟಿ ಕೋವಿಡ್ 19 ಪರೀಕ್ಷೆಗಳನ್ನು ಮಾಡಿದ ಭಾರತದ ಮೊದಲ ರಾಜ್ಯ ಎಂದು ಬರೆಯಲಾಗಿದೆ. (ಏಜೆನ್ಸೀಸ್)
ಚೀನಾದಲ್ಲಿ ಮತ್ತೆ ಕರೊನಾತಂಕ: ಶಾಲೆಗಳು ಬಂದ್, ವಿಮಾನಯಾನ ರದ್ದು
ಬೈಕ್ ಮೇಲೆ ಭಾರತದ ಉದ್ದಗಲ ಸಂಚರಿಸುತ್ತಿರುವ ಯುವಕ! ಸರ್ದಾರ್ ಪಟೇಲ್ ಸ್ಮರಣೆಯಲ್ಲಿ ಏಕತಾ ಯಾತ್ರೆ