ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಕೇಂದ್ರ ದೆಹಲಿಯ ಐಟಿಒ ಜಂಕ್ಷನ್ ಬಳಿ ಟ್ರ್ಯಾಕ್ಟರ್ ಉರುಳಿಬಿದ್ದು ರೈತನೊಬ್ಬ ಮೃತಪಟ್ಟಿರುವುದಾಗಿ ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಪೊಲೀಸರು ಮತ್ತು ರೈತರ ನಡುವಿನ ತಿಕ್ಕಾಟದಲ್ಲಿ ದುರ್ಘಟನೆ ಸಂಭವಿಸಿದ್ದು, ಪ್ರತಿಭಟನೆ ಕೂರುವ ಮುನ್ನ ಪೊಲೀಸರು ನಡೆಸಿದ ಫೈರಿಂಗ್ನಲ್ಲಿ ರೈತ ಮೃತಪಟ್ಟಿದ್ದಾನೆಂದು ಇದೇ ವೇಳೆ ದೀನ ದಯಾಳ್ ಉಪಾಧ್ಯಾಯ ಮಾರ್ಗದ ಬಳಿಯಿದ್ದ ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿರಿ: ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ
ವೈರಲ್ ಆಗಿರುವ ಸಿಸಿಟಿವಿ ವಿಡಿಯೋದಲ್ಲಿ ವೇಗವಾಗಿ ಬರುತ್ತಿದ್ದ ನೀಲಿ ಬಣ್ಣದ ಟ್ರ್ಯಾಕ್ಟರ್, ದೆಹಲಿ ಪೊಲೀಸರು ರಸ್ತೆಗೆ ಅಡ್ಡಲಾಗಿ ಇರಿಸಿದ್ದ ಬ್ಯಾರಿಕೇಡ್ ಗುದ್ದಿ ಎರಡು ಬಾರಿ ರಸ್ತೆಯ ಮೇಲೆ ಪಲ್ಟಿ ಹೊಡೆಯುತ್ತದೆ.
— Vijayavani (@VVani4U) January 26, 2021
ಮೃತ ರೈತನನ್ನು ನವದೀಪ್ ಸಿಂಗ್ ಹುಂಡಾಲ್ಗ (26) ಎಂದು ಗುರುತಿಸಲಾಗಿದ್ದು, ಈತ ಉತ್ತರಖಂಡದ ಬಜ್ಪುರ್ ಏರಿಯಾ ನಿವಾಸಿ. ನವದೀಪ್ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಪೊಲೀಸರು ಮಾಡಿದ ಫೈರಿಂಗ್ನಿಂದ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟನೆಂದು ಉತ್ತರಖಂಡದ ಇತರೆ ಇಬ್ಬರು ರೈತರು ಆರೋಪ ಮಾಡಿದ್ದಾರೆ. ಮಧ್ಯಾಹ್ನದ ಬಳಿಕ ನವದೀಪ್ ಮೃತದೇಹವನ್ನು ಸ್ಥಳದಿಂದ ತೆಗೆಯಲು ರೈತರು ಅನುಮತಿ ನೀಡಿದರು.
ಗಣರಾಜ್ಯೋತ್ಸವ ದಿನದಂದೇ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತು. ಪೊಲೀಸರು ಮತ್ತು ರೈತರ ನಡುವೆ ತೀವ್ರ ತಿಕ್ಕಾಟ ನಡೆಯಿತು. ಈ ವೇಳೆ ರೈತರನ್ನು ಚೆದುರಿಸಲು ಲಾಠಿಚಾರ್ಜ್ ಮತ್ತು ಅಶ್ರುವಾಯು ಬಳಸಲಾಯಿತು. ಉದ್ರಿಕ್ತ ರೈತರು ಪೊಲೀಸರು ರಸ್ತೆಗಳಲ್ಲಿ ಹಾಕಿದ್ದ ಬ್ಯಾರಿಕೇಡ್ಗಳನ್ನು ಕಿತ್ತೆಸೆದು, ಕೆಂಪುಕೋಟೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. (ಏಜೆನ್ಸೀಸ್)
ಇದನ್ನೂ ಓದಿರಿ: ಆ ಒಂದು ವಾಟ್ಸ್ಆ್ಯಪ್ ಮೆಸೇಜ್ಗೆ ಆತುರ ನಿರ್ಧಾರ: ಪ್ರೇಮಿಗಳಿಬ್ಬರ ದುರಂತ ಅಂತ್ಯ!
ಎಟಿಎಂ ಕೀಪ್ಯಾಡ್ ನೆಕ್ಕಿ ಅಶ್ಲೀಲ ಪದ ಪ್ರಯೋಗಿಸಿದ ಅಪರಿಚಿತ: ಬೆಚ್ಚಿಬಿದ್ದ ಮಹಿಳೆಯಿಂದ ದೂರು!
ಮತ್ತೊಬ್ಬರ ನೋವು ಅರ್ಥವಾಗದ ಆದಿತ್ಯಾನಾಥ ನಿಜವಾದ ಯೋಗಿಯಲ್ಲ; ಬಿಜೆಪಿ ಕಾಲೆಳೆದ ಅಖಿಲೇಶ್ ಯಾದವ್
ಹಣೆ ಮೇಲೆ ಒಂದೇ ಕಣ್ಣು ಎರಡು ಕಣ್ಣಿನ ಪಾಪೆ: ವಿಚಿತ್ರ ಮೇಕೆ ಮರಿ ದೇವರ ಅವತಾರವಂತೆ!