ಹುಬ್ಬಳ್ಳಿ : ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಧಾರವಾಡ ವಲಯದ ಸಂಚಾಲಕ ನಿಖಿಲ ಭೂಸದ ಅವರನ್ನು ಪಂದ್ಯ ವೀಕ್ಷಕರನ್ನಾಗಿ ಬಿಸಿಸಿಐ ನೇಮಕಗೊಳಿಸಿದೆ.
ಆಂದ್ರಪ್ರದೇಶದ ವಿಶಾಖಪಟ್ಟಣಮ್ನಲ್ಲಿ ಫೆ. 2 ರಿಂದ 6ರವರೆಗೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಮಧ್ಯೆ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದ ವೀಕ್ಷಕರಾಗಿ ನಿಖಿಲ ಭೂಸದ ಕಾರ್ಯನಿರ್ವಹಿಸಲಿದ್ದಾರೆ.