More

    ‘ನ್ಯಾಯ್’ ಚಿತ್ರದಲ್ಲಿ ಸುಶಾಂತ್ ಸಿಂಗ್ ಸಾವಿನ ಕಥೆ; ಬಿಡುಗಡೆ ಆದ ಟ್ರೇಲರ್ ಕಳಪೆ ಎಂದ ನೆಟ್ಟಿಗರು

    ಮುಂಬೈ: ಬಾಲಿವುಡ್​ ನಟ ಸುಶಾಂತ್ ಸಿಂಗ್​ ರಜಪೂತ್ ಆತ್ಮಹತ್ಯೆ ಬಳಿಕ ಅವರ ಕುರಿತು ಸಿನಿಮಾ ಮಾಡುವುದಾಗಿ ಸಾಕಷ್ಟು ಮಂದಿ ಹೇಳಿಕೊಂಡಿದ್ದರು. ಅದರಂತೆ ಇದೀಗ ಸಿನಿಮಾವೊಂದು ಸಿದ್ಧವಾಗಿದೆ. ಅದರ ಹೆಸರು ನ್ಯಾಯ್; ದಿ ಜಸ್ಟಿಸ್​. ಈ ಚಿತ್ರದ ಟ್ರೇಲರ್ ಶುಕ್ರವಾರ ಬಿಡುಗಡೆ ಆಗಿದೆ. ಮೆಚ್ಚುಗೆಯ ಬದಲಿಗೆ ಗುಣಮಟ್ಟದ ವಿಚಾರವಾಗಿ ಕಳಪೆ ಹಣೆಪಟ್ಟಿ ಪಡೆದುಕೊಂಡಿದೆ.

    ಇದನ್ನೂ ಓದಿ: ಸೀತೆ ಪಾತ್ರಕ್ಕೆ ಕರೀನಾ ಅರ್ಹರಲ್ಲ! ಸಂಭಾವನೆ ವಿಚಾರಕ್ಕೆ ಬ್ಯಾನ್ ಬಿಸಿ..

    ದಿಲೀಪ್ ಗುಲಾಟಿ ನಿರ್ದೇಶನದ ‘ನ್ಯಾಯ್; ದಿ ಜಸ್ಟಿಸ್’ ಸಿನಿಮಾದಲ್ಲಿ ಸುಶಾಂತ್ ಸಿಂಗ್​ ರಜಪೂತ್ ಪಾತ್ರವನ್ನು ಮಹೇಂದ್ರ ಸಿಂಗ್ ಎಂದು ಬದಲಿಸಲಾಗಿದ್ದು, ಜುಬೇರ್ ಖಾನ್​ ಪಾತ್ರ ನಿಭಾಯಿಸಿದ್ದಾರೆ. ಸುಶಾಂತ್​ ಜೀವನದಲ್ಲಿ ನಡೆದ ಒಂದಷ್ಟು ಘಟನೆಗಳನ್ನೇ ಆಧರಿಸಿ ಈ ಸಿನಿಮಾ ಮಾಡಿದ್ದರಾದರೂ, ಕಾಟಾಚಾರಕ್ಕೆ ಚಿತ್ರ ಮಾಡಿ ಮುಗಿಸಿದಂತೆ ಕಾಣಿಸುತ್ತದೆ.

    ಅಸ್ರಾನಿ, ಶಕ್ತಿ ಕಪೂರ್, ಸುಧಾ ಚಂದ್ರನ್​ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಸಾವಿನ ಹಿನ್ನೆಲೆಯ ಹಿಂದಿನ ಕಥೆಯನ್ನು ಥ್ರಿಲ್ಲರ್​ ರೂಪದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆಯಾದರೂ, ನೋಡುಗನಿಗೆ ಅದು ಥ್ರಿಲ್ ನೀಡುವುದಿಲ್ಲ. ಸುಶಾಂತ್ ಸಾವಿನಲ್ಲಿ ದೊಡ್ಡ ಕೈವಾಡವಿತ್ತು ಎಂದು ಹೇಳಲಾದ ನಟಿ ರಿಯಾ ಚಕ್ರವರ್ತಿಯನ್ನು ಬೋಲ್ಡ್ ರೀತಿಯಲ್ಲಿ ತೋರಿಸಿದ್ದಾರೆ. ಟ್ರೇಲರ್​​ಗೆ ಡಿಸ್​ಲೈಕ್​ ನೀಡುತ್ತಿದ್ದಾರೆ ನೆಟ್ಟಿಗರು.

    ಇದನ್ನೂ ಓದಿ: ವಿಶ್ವನಾಥನ್​ ಆನಂದ್​ ಜತೆ ಕಿಚ್ಚನ ಚೆಸ್​

    ಅಂದಹಾಗೆ, ಸುಶಾಂತ್ ಕುರಿತ ಈ ಸಿನಿಮಾವನ್ನು ಪ್ರಸಾರ ಮಾಡದಂತೆ ಅವರ ತಂದೆ ಕೆಕೆ ಸಿಂಗ್​ ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುಶಾಂತ್ ಸಾವನ್ನು ಮತ್ತು ಆ ಸಂದರ್ಭವನ್ನು ಚಿತ್ರತಂಡಗಳು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು. ಆದರೆ, ದೆಹಲಿ ಹೈಕೋರ್ಟ್​ ಅರ್ಜಿಯನ್ನು ತಿರಸ್ಕರಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts