ಬೆಂಗಳೂರು: ನಟನೆ, ನಿರೂಪಣೆ, ಕ್ರಿಕೆಟ್, ಅಡುಗೆ ಹೀಗೆ ಎಲ್ಲದರಲ್ಲಿಯೂ ಗುರುತಿಸಿಕೊಂಡಿರುವ ನಟ “ಕಿಚ್ಚ’ ಸುದೀಪ್, ಇದೀಗ ಚೆಸ್ ಆಡಲಿದ್ದಾರೆ. ಅದೂ ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ವಿಶ್ವನಾಥನ್ ಆನಂದ್ ಅವರ ಜತೆ!
ಕರೊನಾ ವಿರುದ್ಧ ಹೋರಾಟಕ್ಕೆ ನಿಧಿ ಸಂಗ್ರಹಿಸಲು “ಚೆಕ್ಮೇಟ್ ಕೋವಿಡ್’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮ ಜೂನ್ 13ರಂದು ಮುಂಬೈನಲ್ಲಿ ನಡೆಯಲಿದೆ. ಆಮೀರ್ ಖಾನ್, ಸಾಜಿದ್ ನಾಡಿಯಾಡ್ವಾಲ ಸೇರಿ ಹಲವು ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಈಗ ಸ್ಯಾಂಡಲ್ವುಡ್ನಿಂದ ಸುದೀಪ್ಗೆ ಬುಲಾವ್ ಬಂದಿದ್ದು, ವಿಶ್ವನಾಥನ್ ಜತೆ ಚದುರಂಗ ಆಡಲಿದ್ದಾರೆ. ಭಾನುವಾರ ಸಂಜೆ 5 ಗಂಟೆಯಿಂದ 8ರವರೆಗೂ ಈ ಪಂದ್ಯ ನಡೆಯಲಿದ್ದು, ಚೆಸ್ಕಾಮ್ ಇಂಡಿಯಾ ಯೂಟ್ಯೂಬ್ ಚಾನೆಲ್ನಲ್ಲಿ ಇದರ ನೇರಪ್ರಸಾರವಾಗಲಿದೆ.