More

    ನುಕ್ಯಾಡಿ ದೇವಳಕ್ಕೆ ಸಚಿವ ಈಶ್ವರಪ್ಪ ಭೇಟಿ

    ಅಂಪಾರು: ಅಂಪಾರು ಸಮೀಪದ ಎತ್ತರದ ಪ್ರದೇಶದಲ್ಲಿರುವ ನುಕ್ಯಾಡಿ ಪವಿತ್ರ ಉದ್ಭವ ಶ್ರೀಸಿದ್ಧಿ ವಿನಾಯಕ ದೇವಳಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಭಾನುವಾರ ಭೇಟಿ ನೀಡಿ ಮೂಡುಗಣಪತಿ ಸೇವೆ, ಗಣಹೋಮ ಪೂರ್ಣಾಹುತಿ ಸಮಯದ ಪೂಜೆಯಲ್ಲಿ ಪಾಲ್ಗೊಂಡರು. ದೇವಳದ ವತಿಯಿಂದ ಸಚಿವರನ್ನು ಗೌರವಿಸಲಾಯಿತು.

    ದಿವ್ಯತೆಯ ಕ್ಷೇತ್ರಕ್ಕೆ ಬರಲು ಆ ಗಣಪತಿಯೇ ಮನಸ್ಸು ಕೊಟ್ಟಿದ್ದು ಎಂದ ಸಚಿವರು, ಗರ್ಭಗುಡಿಯಲ್ಲಿ ಇರುವ ಬಾವಿಯ ಬಗ್ಗೆ ವಿಸ್ಮಯ ವ್ಯಕ್ತ ಪಡಿಸಿದರು. ದೇವಳದ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಲ್ಲಿಸಿದ ಮನವಿ ಸ್ವೀಕರಿಸಿದ ಸಚಿವರು ಕೊಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
    ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಶಿವಮೊಗ್ಗ ಬಲಮುರಿ ಗಣಪತಿ ದೇವಳದ ಅರ್ಚಕ ರಾಮ ಭಟ್, ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ವೈದ್ಯ, ಆಡಳಿತ ಮೊಕ್ತೇಸರ ಸೂರ್ಯನಾರಾಯಣ ಅಡಿಗ, ಶ್ರೀನಿವಾಸ ಅಡಿಗ, ಅರ್ಚಕ ವಿಘ್ನರಾಜ ಅಡಿಗ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಪ್ರಭಾಕರ ಶೆಟ್ಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts