ಲಖನೌ: ಹೊಸದಾಗಿ ನಾಲ್ಕು ಕರೊನಾ ವೈರಸ್ ಪ್ರಕರಣ ಉತ್ತರ ಪ್ರದೇಶದಲ್ಲಿ ಮಂಗಳವಾರ ವರದಿಯಾಗಿದೆ. ಗೌತಮ್ ಬುದ್ಧ ನಗರದಿಂದ 3, ಶಾಮ್ಲಿಯಿಂದ ಓರ್ವನಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು 37 ಪ್ರಕರಣಗಳು ದಾಖಲಾಗಿದ್ದು, 68 ಶಂಕಿತರನ್ನು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.
ಗೌತಮಬುದ್ಧ ನಗರದ ಮೂರು ಪ್ರಕರಣಗಳಲ್ಲಿ ದಂಪತಿ ನೊಯ್ಡಾದ 137ನೇ ಸೆಕ್ಟರ್ನಲ್ಲಿ ವಾಸವಾಗಿದ್ದು, ಇನ್ನೊರ್ವ ಗ್ರೇಟರ್ ನೊಯ್ಡಾದ ನಿವಾಸಿಯಾಗಿದ್ದಾರೆ. ಸೋಂಕು ತಗುಲಿರುವ ನೊಯ್ಡಾ ದಂಪತಿಗೆ ಟ್ರಾವೆಲ್ ಹಿಸ್ಟರಿ ಇರದಿರುವುದರಿಂದ ಅಧಿಕಾರಿಗಳಿಗೆ ತಲೆನೋವಾಗಿದೆ. ಆದರೆ ಲಂಡನ್ನಿಂದ ಬಂದಿದ್ದ ಆಪ್ತರೊಬ್ಬರಿಗೆ ಆತಿಥ್ಯ ನೀಡಿದ್ದರು ಎನ್ನಲಾಗಿದೆ.
ಆತಿಥ್ಯ ಸ್ವೀಕರಿಸಿದವರಿಗೇನಾದರೂ ರೋಗದ ಲಕ್ಷಣಗಳಿದ್ದರೆ, ದಂಪತಿಗೆ ಹರಡಿರಬಹುದು ಎಂದು ಅಂದಾಜಿಸಲಾಗಿದೆ. ಲಂಡನ್ ಅತಿಥಿಯ ಜಾಲವನ್ನು ಪತ್ತೆ ಮಾಡಿದರೆ ಎಲ್ಲ ಸಂಶಯಗಳಿಗೆ ಉತ್ತರ ಸಿಗಲಿದೆ ಎಂದು ಯುಪಿಯ ಆರೋಗ್ಯ ಇಲಾಖೆ ತಿಳಿಸಿದೆ.
ಗ್ರೇಟರ್ ನೊಯ್ಡಾದ 33 ವರ್ಷದ ಮತ್ತೋರ್ವ ಸೋಂಕಿತನಿಗೆ ಟ್ರಾವೆಲ್ ಹಿಸ್ಟರಿ ಇದೆ. ದುಬೈನಿಂದ ಮಾರ್ಚ್ 15ಕ್ಕೇ ತವರಿಗೆ ಮರಳಿದ್ದ. ದಿನ ನಿತ್ಯದ ಅಭ್ಯಾಸದಂತೆ ಸೋಂಕಿತನ್ನು ಪತ್ತೆ ಮಾಡಲಾಗಿದ್ದು, ಆತನ ಮನೆಯಲ್ಲೇ ಪ್ರತ್ಯೇಕವಾಗಿದ್ದಾನೆ. ಮೂರು ದಿನಗಳ ಹಿಂದಷ್ಟೇ ಗಂಟಲು ಕೆರೆತ ಇದೆ ಎಂದು ಹೇಳಿದ್ದ ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಯಿತು. ಬಳಿಕ ಕೋವಿಡ್ 19 ಇರುವುದು ಧೃಡವಾಗಿದೆ. ಹೀಗಾಗಿ ಸೋಂಕಿತನನ್ನು ಕ್ವಾರಂಟೈನ್ನಲ್ಲಿ ಇಡಲಾಗಿದ್ದು ಆತನ ಮನೆಯ ಪಕ್ಕೆ ಯಾರು ಸುಳಿದಂತೆ ಸೂಚನೆ ನೀಡಲಾಗಿದೆ ಎಂದು ಗೌತಮ್ಬುದ್ಧ ನಗರದ ಜಿಲ್ಲಾಧಿಕಾರಿ ಬಿ.ಎಸ್. ಸಿಂಗ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಕಿಲ್ಲರ್ ಕರೊನಾ ತವರು ಚೀನಾದ ವುಹಾನ್ನಲ್ಲಿ ಲಾಕ್ಡೌನ್ ಸಮಯ ಹೇಗೆ ಕಳೆದೆ ಎಂಬುದನ್ನು ವಿವರಿಸಿದ ಭಾರತೀಯ