ನವದೆಹಲಿ: ತಮಗಾಗದವರನ್ನು ಸುಳಿವೇ ಸಿಗದ ಹಾಗೆ ಸಾಯಿಸಿಬಿಡಲು ನಾನಾ ತಂತ್ರಗಳನ್ನು ಮಾಡುವವರಿದ್ದಾರೆ. ಅಂಥದ್ದೊಂದು ವಿಚಿತ್ರ ಪ್ರಯತ್ನ ಮಾಡಲು ಹೋಗಿ ಸೇಲ್ಸ್ಮ್ಯಾನ್ ಒಬ್ಬ ಕೊಲೆಯತ್ನ ಪ್ರಕರಣವನ್ನು ಎದುರಿಸುತ್ತಿದ್ದಾನೆ. ಈ ನಡುವೆ ಆತ ಸಾಯಿಸಲು ಬಳಸಿದ ತಂತ್ರದಿಂದಲೇ ಹಲವರ ಗಮನ ಸೆಳೆಯಲಾರಂಭಿಸಿದ್ದಾನೆ. ಏಕೆಂದರೆ ಕೊಲೆ ಮಾಡಲು ಇದುವರೆಗೆ ಯಾರೂ ಬಳಸದ ತಂತ್ರವೊಂದನ್ನು ಆತ ಪ್ರಯೋಗಿಸಿದ್ದಾನೆ.
ಹೌದು.. ಕರೊನಾದಿಂದ ಕಂಗಾಲಾಗಿರುವ ಜನರೆಲ್ಲ ಬೇಗ ಈ ಕರೊನಾದಿಂದ ಬಚಾವಾದರೆ ಸಾಕು, ಕರೊನಾದಿಂದ ಜೀವ ಕಳೆದುಕೊಳ್ಳದಿದ್ದರೆ ಸಾಕು ಎಂದುಕೊಳ್ಳುತ್ತಿದ್ದರೆ, ಈತ ಅದೇ ಕರೊನಾವನ್ನೇ ಬಳಸಿಕೊಂಡು ತನ್ನ ಬಾಸ್ನನ್ನು ಮುಗಿಸಿಬಿಡಲು ಯತ್ನಿಸಿದ್ದಾನೆ. ರಮ್ಜಾನ್ ಸಿಮೆನ್ ಎಂಬ ಈ ಸೇಲ್ಸ್ಮ್ಯಾನ್ ಕೊಲೆಯತ್ನದ ಜತೆಗೆ ಕಳ್ಳತನ ಆರೋಪವನ್ನೂ ಎದುರಿಸುತ್ತಿದ್ದಾನೆ.
ಇದನ್ನೂ ಓದಿ: ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಟರ್ಕಿಯಲ್ಲಿನ ಈ ಕಾರ್ ಸೇಲ್ಸ್ಮ್ಯಾನ್ ತನ್ನನ್ನು ಸಾಯಿಸಲು ತಂತ್ರ ಮಾಡಿದ್ದಾಗಿ ಕಾರ್ ಡೀಲರ್ಷಿಪ್ ಓನರ್ ಇಬ್ರಾಹಿಂ ಉನ್ವರ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪಾರ್ಟಿಯೊಂದರಲ್ಲಿ ತನ್ನ ಬಾಸ್ ಇಬ್ರಾಹಿಂ ಕುಡಿಯಬೇಕಿದ್ದ ಮದ್ಯದ ಗ್ಲಾಸ್ಗೆ ರಮ್ಜಾನ್ ಕರೊನಾ ಸೋಂಕಿತನ ಎಂಜಲು (ಸಲೈವಾ) ಬೆರೆಸಿದ್ದಾನೆ. ಅಲ್ಲದೆ 22 ಲಕ್ಷ ರೂ. ಕದ್ದಿದ್ದಾನೆ.
ನನ್ನ ಕೆಲಸಗಾರ, ಸೇಲ್ಸ್ಮ್ಯಾನ್ ರಮ್ಜಾನ್ 5 ಸಾವಿರ ರೂಪಾಯಿ ಕೊಟ್ಟು ಕರೊನಾ ಸೋಂಕಿತನ ಎಂಜಲನ್ನು ಸಂಗ್ರಹಿಸಿದ್ದು, ಅದನ್ನು ನನ್ನ ಡ್ರಿಂಕ್ಸ್ನಲ್ಲಿ ಬೆರೆಸಿದ್ದ. ಇನ್ನೊಬ್ಬ ಉದ್ಯೋಗಿಯಿಂದ ಈ ವಿಷಯ ಗೊತ್ತಾಗಿ ನಾನು ಅದನ್ನು ಕುಡಿಯಲಿಲ್ಲ. ಈ ಥರ ಸಾಯಿಸುವ ಪ್ರಯತ್ನವನ್ನು ನಾನು ಇದೇ ಮೊದಲ ಸಲ ಕಂಡಿದ್ದು, ದೇವರು ದೊಡ್ಡವ, ವಿಷಯ ತಿಳಿದು ಬಚಾವಾದೆ ಎಂದು ಇಬ್ರಾಹಿಂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕೆಟ್ಟಿದ್ದ ಫ್ರಿಡ್ಜ್ ರಿಪೇರಿಗೆಂದು ಬಂದವ ಮನೆಯೊಡತಿಯನ್ನೇ ಕೆಡಿಸಲು ಯತ್ನಿಸಿದ; ಆಕೆಯ ಪುತ್ರಿಯೊಂದಿಗೂ ಅಸಭ್ಯವಾಗಿ ವರ್ತಿಸಿದ…
ಕಾರ್ ಸೇಲ್ ಆಗಿರುವ ಹಣವನ್ನು ಆತನಿಗೆ ನೀಡಿದ್ದೆ. ಅದನ್ನು ಆಫೀಸ್ಗೆ ತಲುಪಿಸಲು ಹೇಳಿದ್ದೆ. ಆತನನ್ನು ಸಂಪೂರ್ಣ ನಂಬಿದ್ದೆ. ಆದರೆ ಆಮೇಲೆ ಕರೆ ಮಾಡಿದರೆ ಆತ ಸ್ವೀಕರಿಸಲಿಲ್ಲ. ಮಾರನೇ ದಿನ ಹಣ ತೀರಾ ಅಗತ್ಯವಿತ್ತು ಅಂತ ಆ 21 ಲಕ್ಷ ರೂ. ಬಳಸಿಕೊಂಡಿದ್ದಾಗಿ ಹೇಳಿದ್ದ. ಈ ವಿಷಯ ಹೊರಗೆ ಗೊತ್ತಾಯಿತು ಎಂದು ನನ್ನ ಬಗ್ಗೆ ಹಗೆ ಸಾಧಿಸುತ್ತಿದ್ದ ಆತ ಈ ಕೆಲಸ ಮಾಡಿದ್ದಾನೆ. ಮಾತ್ರವಲ್ಲ, ಈ ಸಲ ವೈರಸ್ ಮೂಲಕ ಸಾಯಿಸಲು ಆಗಿಲ್ಲ. ಆದರೆ ಮುಂದಿನ ಸಲ ಶೂಟ್ ಮಾಡಿ ಸಾಯಿಸುವುದಾಗಿ ಹೇಳಿದ್ದಾನೆ ಎಂದು ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದಾರೆ. ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸೇಲ್ಸ್ಮ್ಯಾನ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್)
‘ಜೈಲಲ್ಲಿ ನನ್ನ ರೇಪ್ ಮಾಡಿದರು, ಕಿಸ್ ಮಾಡೆಂದು ಹಿಂಸಿಸಿದರು!’ ಜೈಲುವಾಸದ ಅನುಭವ ಹಂಚಿಕೊಂಡ ಸಾಮಾಜಿಕ ಕಾರ್ಯಕರ್ತೆ
ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು