More

    ತಂತ್ರಜ್ಞಾನದ ಬೆಳವಣಿಗೆ ಸಹಕಾರಿ: ಪಿ.ಎ. ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್

    ಕಾರ್ಕಳ: ತಂತ್ರಜ್ಞಾನ ಕ್ರಾಂತಿಯು ದೇಶದ ಬೆಳವಣಿಗೆಗೆ ಪೂರಕವೆನಿಸಲಿದೆ. ನಮ್ಮ ಯುವಜನತೆ ನಿರಂತರ ಕಲಿಕೆಯೊಂದಿಗೆ ಸಮಾಜದ ಹೊಸ ರೀತಿಯ ಸವಾಲುಗಳಿಗೆ ಸಿದ್ಧರಾಗಬೇಕು ಎಂದು ಮಂಗಳೂರಿನ ಪಿ.ಎ. ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್ ಅಭಿಪ್ರಾಯಪಟ್ಟರು.

    ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾನುವಾರ 2019-2020ನೇ ಶೈಕ್ಷಣಿಕ ಸಾಲಿನ ಪದವಿಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ಹಾಗೂ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಪ್ರೊ ಚಾನ್ಸೆಲರ್ ವಿಶಾಲ್ ಹೆಗ್ಡೆ, ನಮ್ಮ ಪರಿಸರದ ಬಗೆಗಿನ ಕಾಳಜಿ ವಿರಳವಾದ ಸಂದರ್ಭದಲ್ಲಿ ವಿವಿಧ ಬಗೆಯ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ. ಪ್ರತಿಯೋರ್ವ ಮಾನವನಿಗೂ ಸಾಮಾಜಿಕ ಬದ್ಧತೆ ಅಗತ್ಯ. ಯಶಸ್ಸಿನ ಹಿಂದೆ ಜ್ಞಾನ, ಪ್ರಾಮಾಣಿಕ ಪ್ರಯತ್ನದೊಂದಿಗೆ ಮತ್ತೊಬ್ಬರ ಚಿಂತನೆಗಳ ಆಲಿಸುವಿಕೆ ಅತ್ಯಗತ್ಯ. ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡು ಸಂಯಮಯುತವಾಗಿ ನಡೆದುಕೊಂಡರೆ ಸರ್ವತೋಮುಖ ಏಳಿಗೆ ಸಾಧ್ಯ ಎಂದರು.

    ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿವಿಧ ಕೋರ್ಸ್‌ಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ನೀಡಿ ಸನ್ಮಾನಿಸಲಾಯಿತು. ಬಿ.ಇ, ಎಂ.ಟೆಕ್ ಹಾಗೂ ಎಂ.ಸಿ.ಎ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪದವಿ ಪ್ರದಾನ ಮಾಡಲಾಯಿತು.
    ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಉಪಪ್ರಾಂಶುಪಾಲ ಡಾ.ಶ್ರೀನಿವಾಸ್ ರಾವ್ ಬಿ.ಆರ್. ಚಿನ್ನ ಹಾಗೂ ಬೆಳ್ಳಿಯ ಪದಕ ಗಳಿಸಿದ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಹಾಗೂ ಮೆಕಾನಿಕಲ್ ವಿಭಾಗದ ಪ್ರೊಫೆಸರ್ ಡಾ.ಶ್ರೀನಿವಾಸ್ ಪೈ ವಂದಿಸಿದರು. ಮೆಕಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಮೆಲ್ವಿನ್ ಕಾರ್ಯಕ್ರಮ ನಿರೂಪಿಸಿದರು.

    ಸಾಧಕ ವಿದ್ಯಾರ್ಥಿಗಳಿಗೆ ಪದಕ
    ಬಿ.ಇ ವಿಭಾಗದಲ್ಲಿ ಬಯೋಟೆಕ್ನಾಲಜಿ ವಿಭಾಗದ ಶರಣ್ಯಾ ವಿ. ನಾಯಕ್, ಸಿವಿಲ್ ವಿಭಾಗದ ಬಿ.ಎಸ್. ಪ್ರಾರ್ಥನಾ, ಕಂಪ್ಯೂಟರ್ ಸೈನ್ಸ್‌ನ ಸಂಜನಾ ನಂಬಿಯಾರ್, ಇಲೆಕ್ಟ್ರಾನಿಕ್ಸ್‌ನ ಶ್ರೇಯಾ, ಇಲೆಕ್ಟ್ರಿಕಲ್‌ನ ಅನೂಪ್ ಶೆಟ್ಟಿ, ಇನ್ಫಾರ್ಮೇಶನ್ ಸೈನ್ಸ್‌ನ ದೀಪಶ್ರೀ ಎಸ್., ಮೆಕ್ಯಾನಿಕಲ್ ವಿಭಾಗದ ಹರ್ಷಿತ್ ಕುಮಾರ್ ಮತ್ತು ಎಂ.ಟೆಕ್ ವಿಭಾಗದ ವಿಭಾ, ಮೇಘ ಮಯೂರಿ, ರಕ್ಷಿತ್, ಸುಖದಾ ಚೊಕ್ಕಾಡಿ, ನೀತಾ ಜೆನಿಸ್, ರಚನಾ ಪಿ., ಲಿಖಿತಾ ಶ್ರೀದೇವಿ, ಶ್ರವಣ್ ಕುಮಾರ್ ಎಂ., ನಾಗೇಶ್ ಕುಡ್ವ ಹಾಗೂ ಎಂ.ಸಿ.ಎ ವಿಭಾಗದ ಕಾವ್ಯಶ್ರೀ ಆರ್.ಭಟ್ ಚಿನ್ನದ ಪದಕ ಪಡೆದರು. ಬಿ.ಇ. ಬಯೋಟೆಕ್ನಾಲಜಿ ವಿಭಾಗದ ದೀಕ್ಷಾ ಆರ್., ಸಿವಿಲ್ ವಿಭಾಗದ ಪೃಥ್ವಿರಾಜ್ ಅರುಣ್ ಕುಲಕರ್ಣಿ, ಕಂಪ್ಯೂಟರ್ ಸೈನ್ಸ್‌ನ ಅಕ್ಷತಾ ವಿ.ಭಟ್, ಇಲೆಕ್ಟ್ರಾನಿಕ್ಸ್‌ನ ಡೈಸಿ ಶೀತಲ್, ಇಲೆಕ್ಟ್ರಿಕಲ್‌ನ ಪುನೀತ್ ಶೆಟ್ಟಿಗಾರ್, ಇನ್ಫೋರ್ಮೇಶನ್‌ಸೈನ್ಸ್‌ನ ಸತ್ಯಭಾಮಾ ಎಂ.ಪ್ರಭು, ಮೆಕ್ಯಾನಿಕಲ್ ವಿಭಾಗದ ಸಾಕೇತ್ ಕುಕ್ಕಿಲ್ಲಾಯ ಮತ್ತು ಎಂ.ಟೆಕ್ ವಿಭಾಗದಲ್ಲಿ ಅಸ್ಮಿತಾ ಎನ್.ಎಂ. ಮೋಕ್ಷಿತಾ ಎಂ., ಅಶ್ವಿತಾ ದಾಂತಿಸ್, ಜಯಶ್ರೀ ಎ., ರಖೀಬಾತನೀಮ್, ಆಕಾಶ್ ಕಾಜವ ಹಾಗೂ ಎಂ.ಸಿ.ಎ ವಿಭಾಗದ ಕ್ರಿಸ್ಟೀನಾ ಶಿಲ್ಪಾ ಬೆಳ್ಳಿ ಪದಕ ಗಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts