More

    ಪ್ರತಿ ವಿಚಾರಣೆಗೂ ನಾವು ಹೊಸ ಭರವಸೆಯೊಂದಿಗೆ ಕೋರ್ಟ್​ಗೆ ಬರುತ್ತೇವೆ, ಇಂದಾದರೂ ನ್ಯಾಯ ಸಿಗಬಹುದು; ನಿರ್ಭಯಾ ಪ್ರಕರಣದ ತಾಯಿ

    ನವದೆಹಲಿ: ಕೋರ್ಟ್​ನಲ್ಲಿ ಹೊಸ ದಿನಾಂಕಗಳು ಬಂದವು ಮತ್ತು ಹೋದವು. ಆದರೆ ಡೆತ್​ ವಾರಂಟ್​ ಈವರೆಗೆ ನೀಡಿಲ್ಲ ಎಂದು ನಿರ್ಭಯಾ ಪ್ರಕರಣದ ಸಂತ್ರಸ್ಥೆ ತಾಯಿ ಆಶಾ ದೇವಿ ಅಸಮಾಧಾನ ವ್ಯಕ್ತಪಡಿಸಿದರು.

    ವಿಚಾರಣೆ ನಡೆವಾಗ ಪ್ರತಿದಿನ ನಾವು ಭರವಸೆಯೊಂದಿಗೆ ಕೋರ್ಟ್​ಗೆ ಬರುತ್ತೇವೆ. ಆದರೆ ಅಪರಾಧಿಗಳ ಪರ ವಕೀಲರು ಏನಾದರೂ ಒಂದು ತಂತ್ರ ಹೂಡುತ್ತಾರೆ ಎಂದು ಬೇಸರಿಸಿಕೊಂಡರು.

    ಇವತ್ತು ಕೂಡ ಅಂತಹ ಭರವಸೆಯೊಂದಿಗೆ ಕೋರ್ಟ್​ಗೆ ಬಂದಿದ್ದೇವೆ. ಇವತ್ತಾದರೂ ನಮಗೆ ನ್ಯಾಯ ಸಿಗಬಹುದು ಎಂಬ ವಿಶ್ವಾಸದಿಂದಲೇ ಬಂದಿದ್ದೇವೆ ಎಂದು ಮಾಧ್ಯಮಗಳೆದುರು ಮಾತನಾಡಿದರು.

    ದೆಹಲಿಯ ಪಟಿಯಾಲ ಹೌಸ್​ ಕೋರ್ಟ್​ ಇಂದು ನಿರ್ಭಯಾ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಅಪರಾಧಿಗಳ ವಿರುದ್ಧ ಹೊಸ ಡೆತ್ ವಾರಂಟ್ ಹೊರಡಿಸುವಂತೆ ನಿರ್ಭಯಾ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಆರಂಭವಾಗಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts