ನವದೆಹಲಿ: ಕೋರ್ಟ್ನಲ್ಲಿ ಹೊಸ ದಿನಾಂಕಗಳು ಬಂದವು ಮತ್ತು ಹೋದವು. ಆದರೆ ಡೆತ್ ವಾರಂಟ್ ಈವರೆಗೆ ನೀಡಿಲ್ಲ ಎಂದು ನಿರ್ಭಯಾ ಪ್ರಕರಣದ ಸಂತ್ರಸ್ಥೆ ತಾಯಿ ಆಶಾ ದೇವಿ ಅಸಮಾಧಾನ ವ್ಯಕ್ತಪಡಿಸಿದರು.
ವಿಚಾರಣೆ ನಡೆವಾಗ ಪ್ರತಿದಿನ ನಾವು ಭರವಸೆಯೊಂದಿಗೆ ಕೋರ್ಟ್ಗೆ ಬರುತ್ತೇವೆ. ಆದರೆ ಅಪರಾಧಿಗಳ ಪರ ವಕೀಲರು ಏನಾದರೂ ಒಂದು ತಂತ್ರ ಹೂಡುತ್ತಾರೆ ಎಂದು ಬೇಸರಿಸಿಕೊಂಡರು.
ಇವತ್ತು ಕೂಡ ಅಂತಹ ಭರವಸೆಯೊಂದಿಗೆ ಕೋರ್ಟ್ಗೆ ಬಂದಿದ್ದೇವೆ. ಇವತ್ತಾದರೂ ನಮಗೆ ನ್ಯಾಯ ಸಿಗಬಹುದು ಎಂಬ ವಿಶ್ವಾಸದಿಂದಲೇ ಬಂದಿದ್ದೇವೆ ಎಂದು ಮಾಧ್ಯಮಗಳೆದುರು ಮಾತನಾಡಿದರು.
ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಇಂದು ನಿರ್ಭಯಾ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಅಪರಾಧಿಗಳ ವಿರುದ್ಧ ಹೊಸ ಡೆತ್ ವಾರಂಟ್ ಹೊರಡಿಸುವಂತೆ ನಿರ್ಭಯಾ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಆರಂಭವಾಗಲಿದೆ. (ಏಜೆನ್ಸೀಸ್)