ಮಂಗಳೂರು: ದಾಂಪತ್ಯಕ್ಕೆ ಜೀವನಕ್ಕೆ ನವಜೋಡಿ ಖುಷಿಯಾಗೆ ಇತ್ತು. ಶುಭ ಹಾರೈಸಿದ್ದ ಸಂಬಂಧಿಕರು ಕೂಡ ಮದುವೆ ಗುಂಗಿನಲ್ಲೇ ಇದ್ದರು. ಅಷ್ಟರಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಮದ್ವೆ ಆದ ದಿನವೇ ತಡರಾತ್ರಿ ಮದುಮಗಳು ಮೃತಪಟ್ಟಿದ್ದು, ಎರಡೂ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಲೈಲಾ ಅಫಿಯಾ(24) ಮೃತೆ. ಅಡ್ಯಾರ್ ಕಣ್ಣೂರು ಬಿರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆ.ಎಚ್. ಕೆ. ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಅಫಿಯಾ ಮದುವೆ ಮುಬಾರಕ್ ಎಂಬುವರ ಜತೆ ನಿನ್ನೆ (ಭಾನುವಾರ) ಅಡ್ಯಾರ್ ಕಣ್ಣೂರಿನ ಜುಮಾ ಮಸ್ಜಿದ್ನಲ್ಲಿ ನಡೆದಿತ್ತು. ಅಡ್ಯಾರ್ ಗಾರ್ಡನ್ನಲ್ಲಿ ಔತಣ ಕೂಟವೂ ಸಂಭ್ರಮದಿಂದ ಜರುಗಿತ್ತು. ಮುದುವೆ ಮುಗಿದ ಬಳಿಕ ನಿನ್ನೆ ರಾತ್ರಿ ಮಾವನ ಮನೆಗೆ ಅಳಿಯ ಬಂದಿದ್ದ. ಇದನ್ನೂ ಓದಿರಿ ಸರ್ಕಾರಿ ಜಾಗದಲ್ಲಿ ಮಣ್ಣು ತೆಗೆಯಲು ಹೋದ ಯುವಕರಿಬ್ಬರು ಜೀವಂತ ಸಮಾಧಿ!
ನವಜೋಡಿಯೂ ಖುಷಿ-ಸಂಭ್ರಮದಲ್ಲಿತ್ತು. ಆದರೆ, ಮದುವೆ ಆದ ಮೊದಲ ರಾತ್ರಿಯೇ 3 ಗಂಟೆಯ ವೇಳೆಗೆ ಮದುಮಗಳಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ನೂರಾರು ಕನಸುಗಳೊಂದಿಗೆ ಮದ್ವೆ ಆಗಿದ್ದವರ ಬಾಳಲ್ಲಿ ಬಂದೆರಗಿದ ಅಕಾಲಿಕ ಸಾವಿಗೆ ಎರಡೂ ಕುಟುಂಬ ಕಂಗಾಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್ಗೆ ಕಟ್ಟಿಹಾಕಿದ ಗ್ರಾಮಸ್ಥರು!
ಡೆತ್ನೋಟ್ ಬರೆದಿಟ್ಟು ಹೈಸ್ಕೂಲ್ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ