ಮಂಗಳೂರು: ಮಂಗಳೂರು ನಗರ ಸಂಚಾರ ಉಪವಿಭಾಗದ ಎಸಿಪಿಯಾಗಿ ಗೀತಾ ಕುಲಕರ್ಣಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಸಿಐಡಿಯಿಂದ ವರ್ಗಾವಣೆಗೊಂಡು ಮಂಗಳೂರಿಗೆ ಆಗಮಿಸಿದ ಅವರನ್ನು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ವಾಗತಿಸಿ, ಕರ್ತವ್ಯಕ್ಕೆ ನಿಯೋಜಿಸಿದರು. ಇಲ್ಲಿಯವರೆಗೆ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಎಂ.ಎ.ನಟರಾಜ್ ಅವರು ಸಿಐಡಿಗೆ ವರ್ಗಾವಣೆಗೊಂಡಿದ್ದಾರೆ.