ಚೆನ್ನೈ: ಖ್ಯಾತ ನಿರ್ದೇಶಕ ಮಣಿರತ್ನಂ ಇದೀಗ ಓಟಿಟಿ ಸಹವಾಸ ಮಾಡಿದ್ದಾರೆ. ಅಂದರೆ, ಅವರ ಮೊದಲ ಓಟಿಟಿ ವೆಬ್ಸಿರೀಸ್ ನವರಸ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಕಸ್ತೂರಿ ಮಹಲ್ನಲ್ಲಿ ಶಾನ್ವಿಗೆ ಹೊಸ ಅವತಾರ
ಒಟ್ಟು ಒಂಭತ್ತು ಸಂಚಿಕೆಗಳ ಈ ಸಿರೀಸ್ಗೆ ಒಟ್ಟು ಒಂಭತ್ತು ಮಂದಿ ನಿರ್ದೇಶಕರು ಒಂದೊಂದು ಏಪಿಸೋಡ್ಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಇದೇ ವೆಬ್ಸಿರೀಸ್ ಇನ್ನೇನು ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿಕೊಳ್ಳಲಿದೆ.
ಅಂದಹಾಗೆ, ಮಣಿರತ್ನಂ, ಗೌತಮ್ ಮನೆನ್, ಕಾರ್ತಿಕ್ ನರೇನ್, ಸಿದ್ಧಾರ್ಥ್, ಅರವಿಂದ್ ಸ್ವಾಮಿ, ಕೆವಿ ಅರವಿಂದ್, ಬಿಜೋಯ್ ನಂಬಿಯಾರ್, ರಥಿಂದ್ರನ್ ಪ್ರಸಾದ್ ಮತ್ತು ಪುನರಂ ತಲೆಗೊಂದರಂತೆ 9 ಏಪಿಸೋಡ್ಗಳನ್ನು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಸುಶಾಂತ್-ಸಾರಾ ಬ್ರೇಕಪ್ ಆಗಿದ್ದೇಕೆ? ಇಲ್ಲಿದೆ ನೋಡಿ ಉತ್ತರ …
ಮಣಿರತ್ನಂ ಅವರ ಮದ್ರಾಸ್ ಟಾಕೀಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ ನವರಸದ ಮೂಲಕ ನಟ ಸಿದ್ಧಾರ್ಥ್ ಮತ್ತು ಅರವಿಂದ್ ಸ್ವಾಮಿ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ವಿಶೇಷ ಏನೆಂದರೆ, ಈ ವೆಬ್ಸಿರೀಸ್ನಲ್ಲಿ ಸೂರ್ಯ, ವಿಜಯ್ ಸೇತುಪತಿ, ಪಾರ್ವತಿ, ಸ್ನೇಹಾ ಸೇರಿ ಹಲವು ಖ್ಯಾತ ನಾಮ ಕಲಾವಿದರು ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲಿ ಬಿಡುಗಡೆ ದಿನಾಂಕವೂ ಘೋಷಣೆ ಆಗಲಿದೆ. (ಏಜೆನ್ಸೀಸ್)