More

    ನೇಪಾಳ ಸಚಿವ ಸಂಪುಟ ವಿಸರ್ಜಿಸಿದ ಪ್ರಧಾನಿ ಕೆ.ಪಿ.ಶರ್ಮಾ ಒಲಿ; ಏಪ್ರಿಲ್​ನಲ್ಲಿ ಚುನಾವಣೆ

    ಕಾಠ್ಮಂಡು: ಸಚಿವ ಸಂಪುಟವನ್ನು ವಿಸರ್ಜಿಸುವ ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಒಲಿ ಅವರ ತೀರ್ಮಾನವನ್ನು ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅಂಗೀಕರಿಸಿದ್ದಾರೆ. ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಒಲಿ ಅವರು ಭಾನುವಾರ ಬೆಳಗ್ಗೆ ತುರ್ತು ಸಚಿವ ಸಂಪುಟ ಸಭೆ ನಡೆಸಿದ್ದು, ಬಳಿಕ ಈ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಇದರಂತೆ, ಹೊಸ ಸರ್ಕಾರದ ಆಯ್ಕೆಗಾಗಿ ಏಪ್ರಿಲ್ 30 ಮತ್ತು ಮೇ 10 ರೊಳಗೆ ಚುನಾವಣೆ ನಡೆಯಲಿದೆ.

    ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ನೇಪಾಳದ ಸಂವಿಧಾನದ ಅನುಚ್ಚೇಧ 76, ವಿಧಿ 1 ಮತ್ತು 7, ಅನುಚ್ಚೇಧ 85 ರ ಪ್ರಕಾರ ಸರ್ಕಾರವನ್ನು ವಿಸರ್ಜಿಸಿದ್ದಾರೆ. ಇದರಂತೆ, ಏಪ್ರಿಲ್ 30ರಂದು ಮೊದಲ ಹಂತದ ಮತದಾನ ನಡೆದರೆ, ಮೇ 10ರಂದು ಎರಡನೇ ಹಂತದ ಮಧ್ಯಂತರ ಚುನಾವಣೆ ನಡೆಯಲಿದೆ.

    ಇದನ್ನೂ ಓದಿ: ಜೆಡಿಎಸ್​ ತೊರೆಯಲಿದ್ದಾರೆ ಹಲವು ಶಾಸಕರು… ತಲ್ಲಣ ಮೂಡಿಸಿದೆ ಈ ಹೇಳಿಕೆ

    ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದೆ. ಹೀಗಿರುವ ಸಂದರ್ಭದಲ್ಲೇ ಸರ್ಕಾರ ವಿಸರ್ಜನೆಯ ಕ್ರಮವನ್ನು ಅಸಾಂವಿಧಾನಿಕ ಎಂದು ಅನೇಕರು ಟೀಕಿಸಿದ್ದಾರೆ. 2017ರಲ್ಲಿ ಚುನಾವಣೆ ನಡೆದಾಗ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿನ ಒಟ್ಟು 275 ಸ್ಥಾನಗಳ ಪೈಕಿ ನೇಪಾಳ್ ಕಮ್ಯೂನಿಸ್ಟ್ ಪಾರ್ಟಿ (ಎನ್​ಸಿಪಿ) 174 ಸ್ಥಾನ ಹೊಂದಿ ಆಡಳಿತ ಚುಕ್ಕಾಣಿ ಹಿಡಿದಿತ್ತು. ವಿಪಕ್ಷ ಸ್ಥಾನದಲ್ಲಿರುವ ನೇಪಾಳ್ ಕಾಂಗ್ರೆಸ್ 63, ಪೀಪಲ್ಸ್ ಸೋಷಿಯಲಿಸ್ಟ್ ಪಾರ್ಟಿ 34, ಸ್ವತಂತ್ರ ಸದಸ್ಯರು 4 ಜನ ಇದ್ದರು. ಆಡಳಿತಾರೂಢ ಎನ್​ಸಿಪಿಯಲ್ಲಿ ಎರಡು ಬಣಗಳ ಸೃಷ್ಟಿಯಾಗಿದ್ದು, ಪ್ರಚಂಡ ನೇತೃತ್ವದ ಬಣ ಆರಂಭದಲ್ಲಿ ಆಡಳಿತ ನಡೆಸಿತ್ತು. 2018ರ ಮಾರ್ಚ್​ನಲ್ಲಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಬಣ ಮೇಲುಗೈ ಸಾಧಿಸಿ ಆಡಳಿತ ಚುಕ್ಕಾಣಿ ಹಿಡಿದಿದೆ. ಈಗ ದಿಢೀರ್ ಅವಧಿಪೂರ್ವ ಚುನಾವಣೆ ವಿವಾದವನ್ನು ಹುಟ್ಟುಹಾಕಿದೆ. (ಏಜೆನ್ಸೀಸ್)

    ಕೇರಳದಲ್ಲೀಗ ಎಲ್​ಡಿಎಫ್​ ವರ್ಸಸ್ ಬಿಜೆಪಿಯಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts