More

    ಭಾರತದ ಪರ ದನಿ ಎತ್ತಿದ ಸಂಸದೆಯ ಲೋಕಸಭಾ ಸದಸ್ಯತ್ವವನ್ನೇ ಕಸಿದ ನೇಪಾಳ…!

    ಕಾಠ್ಮಂಡು: ಚೀನಾ ಕೈಗೊಂಬೆಯಾಗಿ ಕುಣಿಯುತ್ತಿರುವ ನೇಪಾಳದ ಪ್ರಧಾನಿ ಕೆ.ಪಿ ಶರ್ಮ ಓಲಿಗೆ ಭಾರತ ವಿರೋಧಿ ನಿಲುವೇ ಸದ್ಯ ತಿರುಗುಬಾಣವಾಗಿ ಪರಿಣಮಿಸಿದೆ.
    ಯಾವುದೇ ಕ್ಷಣದಲ್ಲಿ ಪ್ರಧಾನಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಓಲಿ ಅಧಿಕಾರ ಉಳಿಸಿಕೊಳ್ಳಲು ಪಕ್ಷವನ್ನೇ ವಿಭಜಿಸುವ ಹುನ್ನಾರ ನಡೆಸಿದ್ದಾರೆ.

    ಆದರೆ, ನೇಪಾಳ ಸಂಸತ್ತಿನಲ್ಲಿ ಭಾರತದ ಪರ ದನಿ ಮೊಳಗಿಸಿ ಸಂಚಲನ ಸೃಷ್ಟಿಸಿದ್ದ ಸಂಸದೆ ಸರಿತಾ ಗಿರಿ ಲೋಕಸಭಾ ಸದಸ್ಯತ್ವವನ್ನೇ ಕಳೆದುಕೊಳ್ಳುವಂತಾಗಿದೆ.

    ಇದನ್ನೂ ಓದಿ; ಭಾರತವಷ್ಟೇ ಅಲ್ಲ, ಭಾರತದ ಔಷಧದ ಮೇಲೂ ಅತೀವ ನಂಬಿಕೆ ಬ್ರೆಜಿಲ್​ ಅಧ್ಯಕ್ಷರಿಗೆ…!

    ಭಾರತದ ಮೂರು ಪ್ರದೇಶಗಳನ್ನು ತನ್ನದೆಂದು ಬಿಂಬಿಸಿ ಕಳೆದ ಜೂನ್​ 18ರಂದು ನೇಪಾಳದ ಹೊಸ ಭೌಗೋಳಿಕ ನಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಿ ಪ್ರಧಾನಿ ಓಲಿ ಅನುಮೋದನೆ ಪಡೆದಿದ್ದರು. ಇದನ್ನು ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಿದ್ದರು. ಆದರೆ, ಜನತಾ ಸಮಾಜವಾದಿ ಪಕ್ಷದ ಸಂಸದೆ ಸರಿತಾ ಗಿರಿ ವಿರೋಧಿಸಿದ್ದರು.

    ಹೊಸ ಪ್ರದೇಶಗಳಾದ ಲಿಪ್ಮಿಯಾಧುರ, ಲಿಪುಲೇಖ್​ ಹಾಗೂ ಕಾಲಾಪಾನಿ ಜಾಗಗಳು ನಮ್ಮದೆನ್ನಲು ಎಲ್ಲಿವೆ ದಾಖಲೆಗಳು ಎಂದು ಸಂಸತ್ತಿನಲ್ಲಿಯೇ ಸರಿತಾ ಪ್ರಶ್ನಿಸಿದ್ದರು. ಅದನ್ನು ತಿದ್ದುಪಡಿ ಮಾಡಿ ಹಳೆಯ ನಕ್ಷೆಯನ್ನೇ ಮುಂದುವರಿಸಬೇಕೆಂದು ಆಗ್ರಹಿಸಿದ್ದರು. ಮಸೂದೆ ವಿರೋಧವಾಗಿ ಮತ ಚಲಾಯಿಸಿದ್ದರು.

    ಇದನ್ನೂ ಓದಿ; ನೇಪಾಳದಲ್ಲಿ ‘ತುರ್ತು ಪರಿಸ್ಥಿತಿ’ ಹೇರ್ತಾರಾ ಪ್ರಧಾನಿ ಓಲಿ; ಅಧಿಕಾರ ಉಳಿಸಿಕೊಳ್ಳಲು ಇಂದಿರಾಗಾಂಧಿ ದಾರಿಯಲ್ಲಿ ಹೆಜ್ಜೆ

    ಈ ತಿದ್ದುಪಡಿ ಪ್ರಸ್ತಾಪವನ್ನು ಹಿಂದಕ್ಕೆ ಪಡೆಯಬೇಕೆಂದು ಆಕೆಯ ಪಕ್ಷದ ವರಿಷ್ಠರು ಸೂಚಿಸಿದ್ದರು. ಇದಕ್ಕೆ ಸರಿತಾ ಸೊಪ್ಪು ಹಾಕಿರಲಿಲ್ಲ. ಅಂತಿಮವಾಗಿ ಪಕ್ಷದ ವಿಪ್​ ಉಲ್ಲಂಘಿಸಿದ ಆರೋಪದಲ್ಲಿ ಸದಸ್ಯತ್ವವನ್ನು ರದ್ದು ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts