ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ತುಂಬ ದುಃಖವಾಯಿತು. ಅವರ ಕುಟುಂಬದವರು, ಭಾರತದ ಜನರು, ಸರ್ಕಾರಕ್ಕೆ ನಮ್ಮ ಸಾಂತ್ವನಗಳು.
ಇಂದು ನೇಪಾಳದ ಅತ್ಯುತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ. ಪ್ರಣಬ್ ಅವರು ಭಾರತ-ನೇಪಾಳ ನಡುವಿನ ಸಂಬಂಧ ಬಲಪಡಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರು. ತಾವು ನಿಭಾಯಿಸಿದ ವಿವಿಧ ಹುದ್ದೆಗಳ ಮೂಲಕ ಎರಡೂ ದೇಶಗಳ ನಡುವಿನ ಸ್ನೇಹವನ್ನು ಮತ್ತಷ್ಟು ಉತ್ತಮಗೊಳಿಸಿದ್ದರು ಎಂದು ಕೆ.ಪಿ.ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ‘ಪ್ರಣಬ್ ದಾ ಜನಮಾನಸದಲ್ಲಿ ಸದಾ ಶಾಶ್ವತ…’: ಸಿಎಂ ಯಡಿಯೂರಪ್ಪ, ಸಂಸದರು..ಸಚಿವರಿಂದ ಸಂತಾಪ
ಹಾಗೇ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಟ್ವೀಟ್ ಮಾಡಿ, ಪ್ರಣಬ್ ಅವರ ಸಾವಿನಿಂದ ಬರೀ ಭಾರತಕ್ಕಷ್ಟೇ ಅಲ್ಲ..ಇಡೀ ದಕ್ಷಿಣ ಏಷ್ಯಾಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸೇವಾ ಸಾಮರ್ಥ್ಯ ಶ್ರೇಷ್ಠವಾದದ್ದು ಎಂದಿದ್ದಾರೆ.(ಏಜೆನ್ಸೀಸ್)