More

    ನಕ್ಸಲರ ಹೀನಕೃತ್ಯ ಖಂಡನೀಯ: ಜನಮತ

    ಛತ್ತೀಸಗಢದಲ್ಲಿ ಸೈನಿಕರ ಮೇಲೆ ನಡೆದ ನಕ್ಸಲ್ ದಾಳಿ ಹೇಯ ಕೃತ್ಯವಾಗಿದ್ದು, ನಕ್ಸಲ್​ವಾದದ ಉಗ್ರ ಸ್ವರೂಪವನ್ನು ಬಟಾಬಯಲಾಗಿಸಿದೆ. ದೇಶದ ರಕ್ಷಕರನ್ನು ಕೊಲ್ಲುವ ಇಂತಹ ದೇಶದ್ರೋಹಿಗಳನ್ನು ನಿಗ್ರಹಿಸಬೇಕಾದದ್ದು ಇಂದಿನ ಕಾಲಘಟ್ಟದ ತುರ್ತಾಗಿದೆ. ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆಗೆ ಎದುರಾಗುವ ವಿಪತ್ತುಗಳನ್ನು ಕಡೆಗಣಿಸುವುದು ಸರ್ವಥಾ ಸರಿಯಲ್ಲ. ಕಡೆಗಣಿಸುವುದರಿಂದ ಅಂತಹ ಕೃತ್ಯಗಳು ಹೆಚ್ಚಾಗಲು ಪ್ರೋತ್ಸಾಹ ನೀಡಿದಂತಾಗುತ್ತದೆ.

    ಛತ್ತೀಸ್​ಗಢ, ಮಹಾರಾಷ್ಟ್ರದಲ್ಲಿ ನಕ್ಸಲರ ದೊಡ್ಡ ಜಾಲವೇ ಸಕ್ರಿಯವಾಗಿದ್ದು, ಶಾಂತಿ, ಕಾನೂನು ಸುವ್ಯವಸ್ಥೆಗೆ ಕಂಟಕವಾಗಿದೆ. ಆದ್ದರಿಂದ ದೇಶದ ಆಡಳಿತ ವ್ಯವಸ್ಥೆ ಶೀಘ್ರವಾಗಿ ಸೂಕ್ತ ಕ್ರಮವನ್ನು ಕೈಗೊಳ್ಳಲೇಬೇಕಾಗಿದೆ. ಇನ್ನು ಮುಂದೆ ಇಂತಹ ದುರಂತಗಳು ನಡೆಯದಂಥ ವಾತಾವರಣವನ್ನು ಸೃಷ್ಟಿಸುವ ಮೂಲಕ ಹುತಾತ್ಮರಾದ ಸೈನಿಕರ ಬಲಿದಾನವನ್ನು ಸಾರ್ಥಕಗೊಳಿಸಬೇಕಾಗಿದೆ.

    | ವಿಶ್ವನಾಥ ಎನ್. ನೇರಳಕಟ್ಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts