More

    ನಿಮ್ಮಿಂದ ನಾವಿದನ್ನು ನಿರೀಕ್ಷಿಸಿರಲಿಲ್ಲ ಎಂದವರಿಗೆ ಪ್ರಧಾನಿ ಜತೆಗಿನ ಫೋಟೋ ಶೇರ್​ ಮಾಡಿ ನವ್ಯಾ ತಿರುಗೇಟು!

    ಕೇರಳ: ಎರಡು ದಿನಗಳ ಪ್ರವಾಸಕ್ಕಾಗಿ ಸೋಮವಾರ (ಏಪ್ರಿಲ್ 24) ಸಂಜೆ ಪ್ರಧಾನಿ ಮೋದಿ ದೇವರು ನಾಡು ಕೇರಳಕ್ಕೆ ಭೇಟಿ ನೀಡಿದರು. ಈ ವೇಳೆ ಕೊಚ್ಚಿಯಲ್ಲಿ ನಡೆದ ಯುವಂ 2023 ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದರು. ಉನ್ನಿ ಮುಕುಂದನ್​, ನವ್ಯಾ ನಾಯರ್​ ಮತ್ತು ಅಪರ್ಣಾ ಬಾಲಮುರಳಿ ಸೇರಿದಂತೆ ಮಲಯಾಳಂ ಚಿತ್ರರಂಗದ ಕಲಾವಿದರು ಸಹ ಮೋದಿ ಜೊತೆ ವೇದಿಕೆ ಹಂಚಿಕೊಂಡರು.

    ಕಲಾವಿದರ ವಿರುದ್ಧ ಆಕ್ರೋಶ

    ಮೋದಿ ಜತೆ ಮಲಯಾಳಂ ನಟ-ನಟಿಯರು ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಕೆಲವರು ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದು, ನವ್ಯಾ ಅವರಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಇನ್ನು ಕೆಲವರು ಹಣಕ್ಕಾಗಿ ಅಪರ್ಣಾ ಬಾಲಮುರಳಿ ಮತ್ತು ನವ್ಯಾ ಅಂಥವರು ಕಾರ್ಯಕ್ರಮದಲ್ಲಿ ಭಾಗಹಿಸಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಚುನಾವಣೆ ನಡೆಸುತ್ತಿರುವುದು ಚುನಾವಣಾ ಆಯೋಗವೋ? ಬಿಜೆಪಿಯೋ? ಸಿದ್ದು ಕಿಡಿ

    ಟ್ರೋಲಿಗರಿಗೆ ತಿರುಗೇಟು

    ಜಾಲತಾಣದಲ್ಲಿ ಸಾಕಷ್ಟು ಟ್ರೋಲ್​ ಆದರೂ ಯಾವುದಕ್ಕೂ ಕ್ಯಾರೆ ಎನ್ನದ ನವ್ಯಾ ನಾಯರ್​, ಇದೀಗ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರಧಾನಿ ಮೋದಿ ಜತೆ ತೆಗೆಸಿಕೊಂಡಿರುವ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದು ನನ್ನ ಸೌಭಾಗ್ಯ ಎಂದು ಫೋಟೋಗಳಿಗೆ ಅಡಿಬರಹ ನೀಡುವ ಮೂಲಕ ಟ್ರೋಲಿಗರಿಗೆ ನವ್ಯಾ ತಿರುಗೇಟು ನೀಡಿದ್ದಾರೆ.

    View this post on Instagram

    A post shared by Navya Nair (@navyanair143)

    ಇನ್ನೂ ನವ್ಯಾ ನಾಯರ್​ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳಬೇಕಿಲ್ಲ. ಮಲಯಾಳಂ ಮೂಲದ ನಟಿಯಾದರೂ ಕನ್ನಡದಲ್ಲೂ ಮನೆ ಮಾತಾಗಿದ್ದಾರೆ. ಅದಕ್ಕೆ ಕಾರಣ ಅವರು ಕನ್ನಡ ನೆಲದಲ್ಲಿ ಕೊಟ್ಟಂತಹ ಸೂಪರ್​ ಹಿಟ್​ ಸಿನಿಮಾಗಳು. ದರ್ಶನ್​ ಅಭಿನಯದ ಗಜ ಹಾಗೂ ರವಿಚಂದ್ರನ್​ ಜೊತೆ ದೃಶ್ಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ, ಬಾಸ್​ ದೃಶ್ಯ-2, ನಮ್ಮ ಯಜಮಾನರು ಸೇರಿದಂತೆ ಕೆಲ ಸಿನಿಮಾಗಳಲ್ಲಿ ನವ್ಯಾ ನಟಿಸಿದ್ದಾರೆ. (ಏಜೆನ್ಸೀಸ್​) ಇದನ್ನೂ ಓದಿ: ತಮಿಳು ನಾಡಗೀತೆ ನಿಲ್ಲಿಸಿ ಕನ್ನಡ ನಾಡಗೀತೆ ಹಾಕಿಸಿದ ಶಾಸಕ ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗದಲ್ಲಿ ಚೆನ್ನಬಸಪ್ಪ ಗೆದ್ದರೇ ನಾನು ಗೆದ್ದ ಹಾಗೆ: ಕೆ.ಎಸ್​. ಈಶ್ವರಪ್ಪ

    ತಮಿಳು ನಾಡಗೀತೆ ನಿಲ್ಲಿಸಿ ಕನ್ನಡ ನಾಡಗೀತೆ ಹಾಕಿಸಿದ ಶಾಸಕ ಕೆ.ಎಸ್.ಈಶ್ವರಪ್ಪ

    VIDEO| RCB ಗೆಲ್ಲೋವರ್ಗೂ ನಾನು ಶಾಲೆಗೆ ಸೇರೋದಿಲ್ಲ…ಪೋಸ್ಟರ್ ಹಿಡಿದ ಪುಟಾಣಿ‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts