ಬೆಂಗಳೂರು: ಇದೀಗ ದೇಶಾದ್ಯಂತ ತಲ್ಲಣ ಮೂಡಿಸಿರುವ ಕರೊನಾ ಪಿಡುಗು ವಿದೇಶಗಳಷ್ಟು ಭಾರತವನ್ನು ಬಾಧಿಸಿಲ್ಲ. ಭಾರತಕ್ಕೆ ಹೆಚ್ಚಿನ ಅಪಾಯವಾಗದಿದ್ದರೂ ಈ ಹೆಮ್ಮಾರಿಯ ಹಾವಳಿಗೆ ಸಿಲುಕಿ ಇಡೀ ಒಂದು ದೇಶವೇ ಅಳಿದು ಹೋಗಲಿದೆ ಎಂದು ಅರಸೀಕೆರೆಯ ಕೋಡಿಹಳ್ಳಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಕರೊನಾ ವೈರಸ್ ಸೋಂಕಿನಿಂದಾಗಿ ವಿವಿಧ ದೇಶಗಳಲ್ಲಿ ಹೊಸ, ಹೊಸ ಶಾಸನ ರಚನೆಯಾಗಲಿವೆ. ಈ ಸೋಂಕಿಗೆ ಪ್ರಕೃತಿಯಿಂದಲೇ ಮದ್ದು ದೊರೆಯಲು ಸಾಧ್ಯ ಎಂದು ಪುನರುಚ್ಚರಿಸಿದ್ದಾರೆ.
ಪ್ರಕೃತಿಯ ಮುನಿಸು: ದೇಶದಲ್ಲಿ ಮುಂದಿನ ದಿನಗಳಲ್ಲಿ ವಿಪರೀತ ಮಳೆಯಾಗಲಿದೆ. ಭೂಕಂಪನ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಜತೆಗೆ ಸಮುದ್ರ ಕೆರಳಿ ರೌದ್ರಾವತಾರ ತೋರಲಿದೆ ಎಂದು ಎಚ್ಚರಿಸಿದ್ದಾರೆ.
ಕರೊನಾ ನರಕಾಸುರನ ವಿರುದ್ಧದ ಹೋರಾಟಕ್ಕೆ ಪುತ್ತಿಗೆ ಮಠದಿಂದ 10 ಲಕ್ಷ ರೂಪಾಯಿ ದೇಣಿಗೆ