More

    ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತೀರಾ..? ದರೋಡೆಕೋರರಿದ್ದಾರೆ ಎಚ್ಚರ!

    ಹಾಸನ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಕೋರರ ಹಾವಳಿ ಹೆಚ್ಚಾಗಿದ್ದು, ದರೋಡೆ ಪ್ರಕರಣಗಳು ಎಗ್ಗಿಲ್ಲದೇ ಸಾಗಿದ್ದು, ಆಗ್ಗಾಗ್ಗೆ ಜನರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ.

    ಎನ್​ಎಚ್​​75 ಬುರಡಾಳ್​ ಬಾರೆ ಬಳಿ ನಿರ್ಜನ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡಿರುವ ಈ ದುಷ್ಕರ್ಮಿಗಳ ತಂಡ ವಾಹನಗಳನ್ನು ಅಡ್ಡಗಟ್ಟಿ, ಚಾಕು,ದೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದಾರೆ.

    ಇದೇ ಸ್ಥಳದಲ್ಲಿ ಹಲವು ಬಾರಿ ಈ ಘಟನೆ ನಡೆದಿವೆ. ಈ ಜಾಗದಲ್ಲಿ ಹಗಲು ರಾತ್ರಿ ಎನ್ನದೇ ಇಂತಹ ಅಪರಾಧ ಕೃತ್ಯಗಳು ನಡೆಯುತ್ತಲೇ ಇವೆ. ಕಳೆದ ರಾತ್ರಿ ಬೈಕಿನಲ್ಲಿ ಬಂದ ಇಬ್ಬರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಹಣ ಕಿತ್ತು ಪರಾರಿಯಾಗಿದ್ದಾರೆ.

    ದ್ವಿಚಕ್ರವಾಹನ ಸವಾರರಾದ ಚಂದ್ರಹಾಸ ಮತ್ತು ಕುಮಾರ್​ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನ ನಗರದಿಂದ 7 ಕಿಮೀ ದೂರದಲ್ಲಿರುವ ಈ ಪ್ರದೇಶ ಸದ್ಯ ದರೋಡೆಕೋರರ ಸ್ಥಳವಾಗಿದ್ದು, ಜನರು ಓಡಾಡಲು ಭಯಪಡುವಂತಾಗಿದೆ. ಈ ಸ್ಥಳದಲ್ಲಿ ಪೊಲೀಸರ ನಿಯೋಜನೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಹರಿಯಾಣ ಮಾಜಿ ಸಿಎಂಗೆ 4 ವರ್ಷ ಜೈಲು, 50 ಲಕ್ಷ ರೂ.ದಂಡ ವಿಧಿಸಿದ ವಿಶೇಷ ಕೋರ್ಟ್​

    ಗ್ರಾಮಕ್ಕೆ ನುಗ್ಗಿ ಬೇವಿನಮರ ಹತ್ತಿ ಕುಳಿತ ಕರಡಿ! ಅರಣ್ಯ ಸಿಬ್ಬಂದಿಯಿಂದ ರಕ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts