ನವದೆಹಲಿ: ಬಹುಶಃ ದೇಶದ ಎಲ್ಲ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆಗೊಳಗಾತ್ತಿರುವ ಶ್ರೇಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ್ದಾಗಲಿದೆಯೇನೋ?
ಸುಶಾಂತ್ ಸಾವಿನ ಪ್ರಕರಣವನ್ನು ಆರಂಭದಲ್ಲಿ ಮುಂಬೈ ಪೊಲೀಸರು ತನಿಖೆ ನಡೆಸಿದ್ದರು. ಆದರೆ, ಸುಶಾಂತ್ ತಂದೆ ಕೆ.ಕೆ. ಸಿಂಗ್ ಪಟನಾದಲ್ಲಿ ಕೇಸ್ ದಾಖಲಿಸಿದ ಬಳಿಕ ಬಿಹಾರ್ ಪೊಲೀಸರು ಇದರ ತನಿಖೆಗಿಳಿದರು.
ಇದನ್ನೂ ಓದಿ; ‘ಒಂದಲ್ಲ…8 ಹಾರ್ಡ್ ಡ್ರೈವ್ಗಳು…!’; ಇನ್ನೊಂದು ಸ್ಫೋಟಕ ಸತ್ಯ ಬಿಚ್ಚಿಟ್ಟ ಸುಶಾಂತ್ ಸ್ನೇಹಿತ
ಸುಶಾಂತ್ಗೆ ಸೇರಿದ 15 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಣ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಅಕ್ರಮವಾಗಿ ಬಳಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಿಯಾ ವಿರುದ್ಧ ಕೇಸ್ ದಾಖಲಿಸಿದರು.
ನಂತರ ಭಾರಿ ಒತ್ತಡ ಕೇಳಿ ಬಂದ ಕಾರಣ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ಪರಿಣಾಮ, ಸದ್ಯ ಕೇಂದ್ರೀಯ ತನಿಖಾ ಸಂಸ್ಥೆ ಈ ಪ್ರಕರಣದ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ; ಸುಶಾಂತ್ ಸಿಂಗ್ ರಜಪೂತ್ ಮಾದಕ ದ್ರವ್ಯ ವ್ಯಸನಿಯೇ? ತನಿಖೆಯಲ್ಲಿ ಹೊರಬಿತ್ತು ಭಯಾನಕ ಸತ್ಯ…!
ಸುಶಾಂತ್ ಹಾಗೂ ರಿಯಾಗೆ ಮಾದಕ ವಸ್ತು ಸರಬರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ದೊರೆತ ಕಾರಣ, ಇದನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಗಮನಕ್ಕೆ ತರಲಾಗಿದೆ.
ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾಗ ಸುಶಾಂತ್ ಗಾಂಜಾ ಸುರುಳಿಗಳನ್ನು ಸುತ್ತಿಡುತ್ತಿದೆ ಎಂದು ಮನೆಗೆಲಸದ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದ. ಜತೆಗೆ, ಸುಶಾಂತ್ಗೆ ನಾಲ್ಕು ಹನಿಗಳನ್ನು ಚಹಾದಲ್ಲಿ ಸೇರಿಸಿ ನೀಡು ಎಂದು ರಿಯಾ ಹೇಳಿದ ಹೇಳಿಕೆ ಕೂಡ ವೈರಲ್ ಆಗಿದೆ. ಇದು ಮಾದಕವಸ್ತುವೇ ಆಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಹೀಗಾಗಿ ರಿಯಾ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಎನ್ಸಿಬಿ ತನಿಖೆ ಮುಂದುವರಿಸಿದಿದೆ.