ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹಲವು ಆಯಾಮಗಳಲ್ಲಿ, ಹಲವರನ್ನು ವಿಚಾರಣೆಗೆ ಒಳಪಡಿಸುತ್ತಿದೆ.
ಸುಶಾಂತ್ ಸಾವಿನ ಕೇಸ್ಗೆ ಪ್ರತಿದಿನವೂ ಒಂದಲ್ಲ ಒಂದು ಹೊಸ ಹಾಗೂ ಕುತೂಹಲ, ಅಚ್ಚರಿ ಮೂಡಿಸುವ ಟ್ವಿಸ್ಟ್ ಸಿಗುತ್ತಿದ್ದು, ಇಂದು ಸಿಬಿಐ ವಿಚಾರಣೆಗೆ ಒಳಪಟ್ಟ ಸುಶಾಂತ್ ಅವರ ಸ್ನೇಹಿತ ಸಿದ್ಧಾರ್ಥ್ ಪಿಠಾಣಿ ಇಂದು ಮತ್ತೊಂದು ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ವರದಿಯಾಗಿದೆ.ಇದನ್ನೂ ಓದಿ: ಎರಡು ಸಲ ಮೃತಪಟ್ಟ 12 ವರ್ಷದ ಬಾಲಕಿ; ಶವಕ್ಕೆ ಸ್ನಾನ ಮಾಡಿಸುವಾಗ ಬೆಚ್ಚಿಬಿದ್ದ ಪಾಲಕರು
ಜೂ.14ರಂದು ಸುಶಾಂತ್ ಮೃತಪಟ್ಟಿದ್ದಾರೆ. ಅವರ ನಿವಾಸದಿಂದ ಜೂ.8ರಂದು ರಿಯಾ ಚಕ್ರವರ್ತಿ ತೆರಳಿದ್ದಾರೆ. ಆದರೆ ರಿಯಾ, ಸುಶಾಂತ್ ಮನೆಯಿಂದ ವಾಪಸ್ ಹೋಗುವ ಮೊದಲು 8 ಹಾರ್ಡ್ ಡ್ರೈವ್ಗಳನ್ನು ನಾಶ ಮಾಡಲಾಗಿದೆ ಎಂಬ ವಿಚಾರವನ್ನು ಸಿದ್ಧಾರ್ಥ್ ಸಿಬಿಐಗೆ ತಿಳಿಸಿದ್ದಾರೆ.
ಜೂ.8ರಂದು ರಿಯಾ, ಸುಶಾಂತ್ ಮನೆಯಿಂದ ಹೊರಹೋಗುವ ಮೊದಲು ಇವರಿಬ್ಬರ ಮಧ್ಯೆ ಜಗಳ ನಡೆದಿದೆ. ಹಾಗೆ, 8 ಹಾರ್ಡ್ ಡ್ರೈವ್ಗಳನ್ನೂ ನಾಶ ಮಾಡಲಾಗಿದೆ. ಆದರೆ ಈ ಡ್ರೈವ್ನಲ್ಲಿ ಏನಿತ್ತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಿದ್ದಾರ್ಥ್ ಹೇಳಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಪ್ರಸಾದ ತಿಂದವರು ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಈ ಹಾರ್ಡ್ ಡ್ರೈವ್ಗಳಲ್ಲಿರುವ ವಿಷಯಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವಾಗ ಅಲ್ಲೊಬ್ಬ ಐಟಿ ವೃತ್ತಿಪರರೂ ಇದ್ದರು. ಅವರನ್ನು ಯಾರು ಕರೆಸಿದ್ದಾರೆ ಎಂಬುದೂ ನನಗೆ ಗೊತ್ತಿಲ್ಲ. ಹಾರ್ಡ್ ಡ್ರೈವ್ಗಳನ್ನು ನಾಶ ಮಾಡುವಾಗ ಸುಶಾಂತ್ ಮತ್ತು ರಿಯಾ ಇಬ್ಬರೂ ಒಂದು ಕೋಣೆಯಲ್ಲಿ ಕುಳಿತು ನೋಡುತ್ತಿದ್ದರು. ಹಾಗೇ, ಮನೆಯ ಕೆಲಸದವರಾದ ದೀಪೇಶ್ ಸಾವಂತ್ ಮತ್ತು ಅಡುಗೆಯವನಾದ ನೀರಜ್ ಸಿಂಗ್ ಕೂಡ ಅಲ್ಲಿಯೇ ಇದ್ದರು ಎಂದು ಸಿದ್ದಾರ್ಥ್ ಮಾಹಿತಿ ನೀಡಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಇನ್ನೊಮ್ಮೆ ಸಿದ್ದಾರ್ಥ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಲಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್)
ಟೀ ಅಥವಾ ನೀರಿನಲ್ಲಿ ನಾಲ್ಕು ಡ್ರಾಪ್ ಬೆರೆಸಿ ಕೊಡು: ರಿಯಾ ವಾಟ್ಸ್ಆ್ಯಪ್ ಚಾಟ್ನಲ್ಲಿದೆ ಮಹತ್ವದ ಸುಳಿವು!