ನವದೆಹಲಿ: ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಜೂ.15ರಂದು ನಡೆದ ಭಾರತ ಮತ್ತು ಚೀನಿ ಯೋಧರ ನಡುವಿನ ರಕ್ತಸಿಕ್ತ ಘರ್ಷಣೆಗೆ ಚೀನಾ ಪಾಳೆಯದ ಶಿಬಿರದಲ್ಲಿ ನಿಗೂಢವಾಗಿ ಕಾಣಿಸಿಕೊಂಡ ಬೆಂಕಿ ಕಾರಣವಾಯಿತು ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್ ಹೇಳಿದ್ದಾರೆ.
ಈ ಘರ್ಷಣೆಯಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಹತರಾಗಿರುವುದಾಗಿ ಪುನರುಚ್ಚರಿಸಿದ ಅವರು, ಕಮಾಂಡರ್ ಮಟ್ಟದ ಸಭೆಯಲ್ಲಿ ವಾಸ್ತವ ಗಡಿರೇಖೆಯಲ್ಲಿ ಯೋಧರು ಯಾರೂ ಇರಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ, ತಮ್ಮ ಭಾಗದ ಪ್ರದೇಶದಲ್ಲಿ ಭಾರತೀಯ ಯೋಧರು ಇದನ್ನು ಪರಿಶೀಲಿಸಲು ಹೋದಾಗ, ಅಲ್ಲಿ ಚೀನಾ ಯೋಧರು ಇರುವುದು ಪತ್ತೆಯಾಯಿತು. ಜತೆಗೆ, ಅಲ್ಲೊಂದು ಟೆಂಟ್ ಹಾಕಿರುವುದು ಗೊತ್ತಾಯಿತು ಎಂದು ವಿವರಿಸಿದ್ದಾರೆ.
ಆ ಟೆಂಟ್ ಅನ್ನು ತೆಗೆದು ಹಾಕುವಂತೆ ಭಾರತದ ಕಮಾಂಡಿಂಗ್ ಆಫೀಸರ್ ಹೇಳಿದ್ದರು. ಅದರಂತೆ ಅವರು ಟೆಂಟ್ ತೆಗೆಯುವಾಗ ಹಠಾತ್ತನೆ ಅದರಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದು ಉಭಯ ರಾಷ್ಟ್ರದ ಯೋಧರ ನಡುವಿನ ಘರ್ಷಣೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.
‘ಕೊವಿಡ್-19 ಸೋಂಕನ್ನು ಜಗತ್ತಿಗೆ ಕಳಿಸಿದ್ದು ಭಗವಾನ್ ಶ್ರೀಕೃಷ್ಣ…’: ಕಾಂಗ್ರೆಸ್ ಮುಖಂಡನ ವಾದ