ನವದೆಹಲಿ: ಇದುವರೆಗೂ ಶತ್ರ ರಾಷ್ಟ್ರಗಳ ಜತೆ ಕಾಲು ಕೆರೆದು ಜಗಳ ತೆಗೆಯುತ್ತಿದ್ದ ಚೀನಾ ಇದೀಗ ಪರಮಾಪ್ತ ರಾಷ್ಟ್ರದ ಬೆನ್ನಿಗೇ ಚೂರಿ ಇರಿಯುವ ಕೃತ್ಯ ಎಸಗಿತಾ ಎಂಬ ಶಂಕೆ ಮೂಡಲಾರಂಭಿಸಿದೆ. ಚೀನಾದ ಪರಮಾಪ್ತ ರಾಷ್ಟ್ರ ಮ್ಯಾನ್ಮಾರ್ನಲ್ಲಿ ಹಲವು ಭಯೋತ್ಪಾದನಾ ಸಂಘಟನೆಗಳಿವೆ. ಈ ಸಂಘಟನೆಗಳ ಸದಸ್ಯರಿಗೆ ಚೀನಾ ಶಸ್ತ್ರಾಸ್ತ್ರ ಪೂರೈಸಿ ತನ್ನ ಆಂತರಿಕ ಭದ್ರತೆಗೆ ಸಂಚಕಾರ ತರುತ್ತಿರುವುದಾಗಿ ಮ್ಯಾನ್ಮಾರ್ ಆರೋಪಿಸಿದೆ.
ರಷ್ಯಾದ ಟಿವಿ ಚಾನೆಲ್ವೊಂದಕ್ಕೆ ಸಂದರ್ಶನ ನೀಡಿರುವ ಮ್ಯಾನ್ಮಾರ್ನ ಸೀನಿಯರ್ ಜನರಲ್ ಔಂಗ್ ಲ್ಹಾಯಿಂಗ್, ಮ್ಯಾನ್ಮಾರ್ನಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರಿಗೆ ಬಲಿಷ್ಠ ರಾಷ್ಟ್ರವೊಂದರ ಬೆಂಬಲ ದೊರೆಯುತ್ತಿದೆ. ಆದ್ದರಿಂದ, ಆ ಗುಂಪುಗಳನ್ನು ಹತ್ತಿಕ್ಕಲು ಜಾಗತಿಕ ಶಕ್ತಿಗಳು ಮ್ಯಾನ್ಮಾರ್ಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಒಂದೇ ಗುಂಡಿಗೆ 9 ಶವ ಎಸೆದು ಅಂತ್ಯಸಂಸ್ಕಾರ ಮಾಡಿದ್ದವರಿಗೆ ಎದುರಾಯ್ತು ಸಂಕಷ್ಟ!
ಮ್ಯಾನ್ಮಾರ್ನಲ್ಲಿ ಅರಕಾನ್ ಆರ್ಮಿ (ಎಎ) ಮತ್ತು ಅರಕಾನ್ ರೋಹಿಂಗ್ಯಾ ಸಾಲ್ವೇಷನ್ ಆರ್ಮಿ (ಎಆರ್ಎಸ್ಎ) ಎಂಬ ಭಯೋತ್ಪಾದನಾ ಸಂಘಟನೆಗಳು ರಾಖೈನ್ ರಾಜ್ಯದಲ್ಲಿ ಕಾರ್ಯಾಚರಿಸುತ್ತಿವೆ. 2019ರಲ್ಲಿ ನೆಲಬಾಂಬ್ ದಾಳಿ ನಡೆಸಿದ್ದ ಎಎ ಉಗ್ರ ಸಂಘಟನೆಗಳ ಮೇಲೆ ದಾಳಿ ನಡೆಸಿದಾಗ ಅವರ ಬಳಿ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು.
ಚೀನಾ ವಿರುದ್ಧ ಮ್ಯಾನ್ಮಾರ್ ಈ ರೀತಿಯ ಆರೋಪ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗೆಂದು ಈ ರೀತಿಯ ಆರೋಪ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಮ್ಯಾನ್ಮಾರ್ ಆಡಳಿತಗಾರರು ಚೀನಾ ವಿರುದ್ಧ ಇಂಥ ಆರೋಪಗಳನ್ನೂ ಮಾಡಿದ್ದಾರೆ. ಆದರೆ ಈ ಬಾರಿ ಭಾರತದೊಂದಿಗೆ ಚೀನಾ ಲಡಾಖ್ ಬಳಿ ಘರ್ಷಣೆಗೆ ಮುಂದಾಗಿರುವ ಸಂದರ್ಭದಲ್ಲೇ ಮ್ಯಾನ್ಮಾರ್ ಇಂಥ ಆರೋಪ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಭಾರತೀಯ ರೈಲ್ವೆ ಇತಿಹಾಸದಲ್ಲೇ ಗಮನಾರ್ಹ ಸಾಧನೆ ಮಾಡಿದೆ.. ಅದೇನು ಗೊತ್ತಾ?