More

    ‘ಅಂದು ಏನು ನಡೆಯಿತೋ..ಅದು ಭಯಾನಕತೆಯನ್ನೂ ಮೀರಿದ್ದು…’ ಸುರೇಶ್​ ರೈನಾ ಟ್ವೀಟ್​

    ಚೆನ್ನೈ ಸೂಪರ್​ ಕಿಂಗ್ಸ್​ ತಂಡದಿಂದ ಭಾರತಕ್ಕೆ ಮರಳಿರುವ ಸುರೇಶ್​ ರೈನಾ ಇಂದು ಟ್ವೀಟ್​ ಮಾಡಿದ್ದಾರೆ. ಮಾವನ ಹತ್ಯೆ, ಅತ್ತೆಯ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ..ಹಾಗೇ ಅಂದು ರಾತ್ರಿ ನಡೆದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನನ್ನ ಸಹೋದರ ಸಂಬಂಧಿಯೋರ್ವ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ ಎಂದೂ ತಿಳಿಸಿದ್ದಾರೆ.

    ಸುರೇಶ್​ ರೈನಾ ವಾಪಸ್​ ಬರುತ್ತಿದ್ದಂತೆ ಹರಡಿದ ಸುದ್ದಿಗಳು ಒಂದೆರಡಲ್ಲ. ಅದೆಷ್ಟೋ ಊಹಾಪೋಹಗಳು ಎದ್ದಿದ್ದವು. ಬಾಲ್ಕನಿ ಕೊಠಡಿ ವಿಚಾರಕ್ಕೆ ಜಗಳವಾಡಿಕೊಂಡು ಬಂದಿದ್ದಾರೆ..ಇನ್ನುಮುಂದೆ ಸಿಎಸ್​ಕೆ ತಂಡದಲ್ಲಿ ಆಡುವುದಿಲ್ಲ ಎಂದೂ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಗ ಎಲ್ಲ ಊಹಾಪೋಹಗಳಿಗೂ ಫುಲ್​ಸ್ಟಾಪ್​ ಇಡುವಂತೆ ಸುರೇಶ್​ ರೈನಾ ಅವರೇ ಟ್ವೀಟ್ ಮಾಡಿದ್ದಾರೆ.
    ಪಂಜಾಬ್​​ನ ಪಠಾಣ್​ಕೋಟ್​​ನಲ್ಲಿರುವ ಸುರೇಶ್​ ರೈನಾ ಅವರ ಅತ್ತೆ (ತಂದೆಯ ಸೋದರಿ), ಮಾವ ಮತ್ತು ಕುಟುಂಬದವರೆಲ್ಲ ರಾತ್ರಿ ಮನೆಯಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಅದರಲ್ಲಿ ರೈನಾ ಮಾವ ಸಾವನ್ನಪ್ಪಿದ್ದರೆ, ಅತ್ತೆಯ ಸ್ಥಿತಿ ಗಂಭೀರವಾಗಿತ್ತು. ಹಾಗೇ ಮನೆಯವರೂ ಕೂಡ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ: ಬಾಲ್ಕನಿ ಕೊಠಡಿ ಕೊಟ್ಟಿಲ್ಲವೆಂದು ಸಿಎಸ್​​ಕೆಯನ್ನೇ ತೊರೆದ ಸುರೇಶ್​ ರೈನಾ…?!

    ಆ ರಾತ್ರಿ ನಿಜಕ್ಕೂ ಆಗಿದ್ದೇನು ಎಂಬುದು ಇಂದಿನವರೆಗೆ ನಮಗೆ ಯಾರಿಗೂ ಸರಿಯಾಗಿ ಅರ್ಥವಾಗುತ್ತಿಲ್ಲ. ಯಾರು ಮಾಡಿದ್ದಾರೆ ಎಂಬುದೂ ತಿಳಿದಿಲ್ಲ. ಈ ದಾಳಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶಿಸಬೇಕು ಎಂದು ನಾನು ಪಂಜಾಬ್​ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ಅಪರಾಧಿಗಳನ್ನು ಶೀಘ್ರವೇ ಬಂಧಿಸಬೇಕು..ಅವರು ಇನ್ನಷ್ಟು ದುಷ್ಕೃತ್ಯ ಎಸಗಲು ಬಿಡಬಾರದು ಎಂದು ಒಂದು ಟ್ವೀಟ್​​ನಲ್ಲಿ ಹೇಳಿದ್ದಾರೆ.

    ಹಾಗೇ ಇನ್ನೊಂದು ಟ್ವೀಟ್​ ಮಾಡಿ, ಭಯಾನಕತೆಗೂ ಮೀರಿದ ಘಟನೆ ನಮ್ಮ ಕುಟುಂಬದಲ್ಲಿ ನಡೆದು ಹೋಯಿತು. ನನ್ನ ಮಾವನನ್ನು ಕೊಲೆ ಮಾಡಲಾಗಿದೆ. ಅತ್ತೆ ಮತ್ತು ಇಬ್ಬರು ಸೋದರ ಸಂಬಂಧಿಗಳು ಗಾಯಗೊಂಡಿದ್ದಾರೆ. ಅದರಲ್ಲೂ ಓರ್ವ ಕಸಿನ್​ ನಿನ್ನೆ ರಾತ್ರಿ ತೀರಿಕೊಂಡರು. ಅತ್ತೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ರೈನಾ ತಿಳಿಸಿದ್ದಾರೆ. (ಏಜೆನ್ಸೀಸ್)

    ಮಾವನ ಹತ್ಯೆ, ಅತ್ತೆಯ ಪರಿಸ್ಥಿತಿ ತೀವ್ರ ಗಂಭೀರ: ಇದು ಸುರೇಶ್​ ರೈನಾ ವಾಪಸ್​ ಆಗಲು ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts