ಬೆಂಗಳೂರು: ಕಳ್ಳತನವಾದ್ರೂ ಮಾಡಿ, ಭಿಕ್ಷೆಯಾದ್ರೂ ಬೇಡಿ.. ಒಟ್ನಲ್ಲಿ ಲ್ಯಾಪ್ಟಾಪ್ ಕಡ್ಡಾಯವಾಗಿ ಇರಲೇ ಬೇಕು… ಊಟ- ತಿಂಡಿಗೆ ಖರ್ಚು ಮಾಡೋಕೆ ಆಗುತ್ತೆ.. ಲ್ಯಾಪ್ಟಾಪ್ ತಗೋಳೋಕೆ ಏನ್ ಪ್ರಾಬ್ಲಂ? ನಿಮ್ಮ ಲೈಫ್ ಸ್ಪೈಲ್ ಆಗಬಾರದು ಅಂದ್ರೆ ನಾವೇಳ್ದಾಗೆ ಮಾಡಿ…
ಇದು ಬೆಂಗಳೂರಿನ ಎಂವಿಜೆ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಚ್ಒಡಿ ಪ್ರೊ. ಮುರಳೀಧರ್ ಕೊಟ್ಟ ಖಡಕ್ ವಾರ್ನಿಂಗ್. ಮುಂದಿನ ವಾರದಲ್ಲಿ ಇಂಟರ್ನಲ್ ಎಕ್ಸಾಂ ಇದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಲು ವಿಡಿಯೋ ಕಾಲ್ ಮಾಡಿ ಸಂವಹನ ನಡೆಸಿದ ಪ್ರೊ.ಮುರಳೀಧರ್, ಮಾತಿನ ಆರಂಭದಲ್ಲೇ ‘ಇವಾಗ ಇನ್ನೊಂದು ಮಳೆ ಬರುತ್ತೆ ನೋಡಿ’ ಎಂದು ಶಾಕ್ ನೀಡಿದರು.
ಇದನ್ನೂ ಓದಿರಿ ಯುಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ
ಗ್ರಾಮೀಣ ಭಾಗದ ಮಹಿಳಾ ವಿದ್ಯಾರ್ಥಿಗಳಾದಿಯಾಗಿ ‘ಸರ್… ಏಕಾಏಕಿ ಲ್ಯಾಪ್ಟಾಪ್ ಅಂದ್ರೆ ಹೇಗೆ? ನಮ್ಮತ್ರ ಹಣ ಇಲ್ಲ…’ ಎಂದು ಗೋಗರೆದರೂ ಕ್ಯಾರೆ ಎನ್ನಲಿಲ್ಲ. ಇನ್ನೂ ಕೆಲ ವಿದ್ಯಾರ್ಥಿಗಳು, ‘ಈ ಬಗ್ಗೆ ಲೆಟರ್ ಕೊಡಿ. ನಮ್ಮ ತಹಸೀಲ್ದಾರ್ ಬಳಿ ಮಾತಾಡುತ್ತೇವೆ. ಇಲ್ಲವೇ ನಾವು ಕಟ್ಟಿದ ಶುಲ್ಕದ ಹಣ ವಾಪಸ್ ಕೊಟ್ಟುಬಿಡಿ’ ಎಂದರು. ‘ಇದ್ಯಾವುದರ ಬಗ್ಗೆಯೂ ಕೇಳಬೇಡಿ… ಕಡ್ಡಾಯವಾಗಿ ಎಲ್ಲರೂ ಲ್ಯಾಪ್ಟಾಪ್ ಹೊಂದಿಸಿಕೊಳ್ಳಬೇಕು ಅಷ್ಟೆ. ಇದು ಫೈನಲ್’ ಎಂದು ಎಚ್ಚರಿಸಿದರು.
ಇದನ್ನೂ ಓದಿರಿ ಮೃತ ಸ್ನೇಹಿತನ ಮನೆ ಕಟ್ಟಿ.. ಅಲ್ಲೇ 11ನೇ ದಿನದ ಕಾರ್ಯ ನೆರವೇರಿಸಿದ ಯುವಕರ ಸಾಹಸಗಾಥೆ ಇದು!
ಮುಂದಿನ ವಾರದಲ್ಲಿ ಇಂಟರ್ನಲ್ ಎಕ್ಸಾಂ ಶುರುವಾದ್ರೆ ಲ್ಯಾಪ್ಟಾಪ್ ಹೊಂದಿಸೋದು ಹೇಗೆ? ಲ್ಯಾಪ್ಟಾಪ್ ಇಲ್ಲಾಂದ್ರೆ ಎಕ್ಸಾಂ ಮಿಸ್ ಆಗುತ್ತೆ.. ಎಂಬ ಟೆನ್ಶನ್ ವಿದ್ಯಾರ್ಥಿಗಳಲ್ಲಿ ಶುರುವಾಗಿದೆ. ಪ್ರೊಫೆಸರ್ ಬಳಿ ವಿದ್ಯಾರ್ಥಿಗಳು, ‘ನಮ್ಮ ಲೈಪ್ ಹಾಳಾಗುತ್ತೆ ಸರ್.. ದಯವಿಟ್ಟು ಪರ್ಯಾಯ ವ್ಯವಸ್ಥೆ ಮಾಡಿ’ ಎಂದರೂ ಅವರು, ‘ನಿಮ್ಮ ಜೀವನ ಹಾಳಾಗಬಾರದು ಅಂದ್ರೆ ಲ್ಯಾಪ್ಟಾಪ್ ತಗೋಳಿ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು, ಈ ಸಂಭಾಷಣೆಯ ಪೂರ್ಣ ವಿವರ ಈ ವಿಡಿಯೋದಲ್ಲಿದೆ ನೋಡಿ.
ಈ ವಿಡಿಯೋ ನೋಡಿ
ವಿದ್ಯಾರ್ಥಿಗಳಿಗೆ 'ಕಳ್ಳ'ಪಾಠ ಹೇಳಿದ ಪ್ರೊಫೆಸರ್..!
ವಿದ್ಯಾರ್ಥಿಗಳು ಕಳ್ಳತನ ಮಾಡಿ ಇಲ್ಲವೇ ಭಿಕ್ಷೆ ಬೇಡಿಯಾದ್ರೂ ಲ್ಯಾಪ್ಟಾಪ್ ತಗೋಬೇಕಂತೆ.. ! ಹೀಗಂತ ಬೆಂಗಳೂರಿನ ಎಂವಿಜೆ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಚ್ಒಡಿ ಪ್ರೊ. ಮುರಳೀಧರ್ ವಿಡಿಯೋ ಕಾಲ್ನಲ್ಲೇ ವಾರ್ನಿಂಗ್ ಮಾಡಿದ್ದಾರೆ. ವಿದ್ಯಾರ್ಥಿಗಳು ಹಣ ಇಲ್ಲ ಅಂದ್ರೂ ಕ್ಯಾರೆ ಎನ್ನದ ಪ್ರೊಫೆಸರ್ ಹೇಗೆ ಮಾತಾಡಿದ್ದಾರೆ ಈ ವಿಡಿಯೋ ನೋಡಿ…#Beg #Laptop #Warning #Students #Bangalore #MVJCollege
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜೂನ್ 5, 2020