ಲಖನೌ: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಧಾಂಪುರ್ ನಗರದಲ್ಲಿ ಹೋಳಿ ಆಚರಣೆಗೆ ಮುನ್ನ ಯುವಕರ ಗುಂಪೊಂದು ಮುಸ್ಲಿಂ ಕುಟುಂಬಕ್ಕೆ ಬಣ್ಣ ಬಳಿದಿದ್ದು, ಘಟನೆ ಯಾವಾಗ ಸಂಭವಿಸಿದೆ ಎಂಬುದು ಅಸ್ಪಷ್ಟವಾಗಿದ್ದರೂ, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಇದನ್ನೂ ಓದಿ: ‘ನಿನ್ನ ಗಂಡನನ್ನು ಒಂದು ರಾತ್ರಿ ಕಳಿಸು’!: ಅಭಿಮಾನಿಗೆ ನಟಿ ಜೋತಿಕಾ ಕೊಟ್ಟ ಉತ್ತರ ಹೀಗಿತ್ತು ನೋಡಿ..
ವೀಡಿಯೊದಲ್ಲಿ ಯುವಕರ ಗುಂಪೊಂದು ಬೈಕ್ನಲ್ಲಿ ತೆರಳುತ್ತಿದ್ದ ಸವಾರ ಮತ್ತು ಇಬ್ಬರು ಮಹಿಳೆಯರನ್ನು ಅಡ್ಡಗಟ್ಟಿ ಬಣ್ಣ ಬಳಿದು ನೀರು ಎರಚಿದ್ದಾರೆ. ಆಗ ಇದಕ್ಕೆ ಆ ಕುಟುಂಬವು ಅಸಹನೆ ತೋರಿದೆ. ಪ್ರತಿರೋಧ ಲೆಕ್ಕಿಸದೆ ಯುವಕರು ‘ಹರ್ ಹರ್ ಮಹಾದೇವ್’ ಮತ್ತು ‘ಜೈ ಶ್ರೀ ರಾಮ್’ ಘೋಷಣೆ ಕೂಗಿದೆ.
क्या यह छेड़खानी नही कहलाएगा??
क्या महिलाओ को रोक कर, धार्मिक नारे लगाकर, ज़बरदस्ती रंग डालना जुर्म नही है??
रमज़ान चल रहा है, लोग खरीदारी करने के लिए बाहर निकलते है!@bijnorpolice #Muslims pic.twitter.com/BAhVmeDoQx
— Zulqarnain ذوالقر نین (@Zulqarn34895931) March 24, 2024
ಘಟನೆ ಯಾವಾಗ ಸಂಭವಿಸಿತು ಎಂಬುದು ಅಸ್ಪಷ್ಟವಾಗಿದ್ದರೂ, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಣ್ಣಬಳಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಪೊಲೀಸರು ನೀಡಿದ್ದಾರೆ.
‘ರಾಮಾಯಣ’ ಚಿತ್ರೀಕರಣಕ್ಕೆ ಸಜ್ಜು..ಮೌನಕ್ಕೆ ಜಾರಿದ ಯಶ್, ಮತ್ತಿತರ ಪಾತ್ರದಾರಿಗಳು!