More

    ಪ್ರಣಯ್​, ಅಮೃತಾರನ್ನು ವಿಲನ್​ ರೀತಿ ಬಿಂಬಿಸಲು ಮುಂದಾದ ಆರ್​ಜಿವಿಗೆ ಶಾಕ್​ ಕೊಟ್ಟ ಕೋರ್ಟ್​!​

    ಮುಂಬೈ: ಸದಾ ವಿವಾದಗಳಿಂದ ಸುದ್ದಿಯಾಗುವ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 2018ರಲ್ಲಿ ತೆಲಂಗಾಣವನ್ನೇ ಬೆಚ್ಚಿಬೀಳಿಸಿದ್ದ ಮರ್ಯಾದೆ ಹತ್ಯೆ ಆಧಾರಿತ ಸಿನಿಮಾ ಪೋಸ್ಟರ್​ ಅನ್ನು ವರ್ಮಾ ಅವರು ಇತ್ತಿಚೆಗಷ್ಟೇ ಬಿಡುಗಡೆ ಮಾಡಿದ್ದರು. ಪೋಸ್ಟರ್​ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ಕಾನೂನು ಹೋರಾಟ ಎದುರಿಸುವಂತಾಗಿದೆ.

    ಆರ್​ಜಿವಿ ನಿರ್ದೇಶಿಸುತ್ತಿರುವ ಮರ್ಡರ್​ ಚಿತ್ರಕ್ಕೆ ಪ್ರಣಯ್​ ತಂದೆ ಬಾಲಾಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಆರ್​ಜಿವಿ ಚಿತ್ರ ಪ್ರಣಯ್​ ಕೊಲೆ ಪ್ರಕರಣದ ಮೇಲೆ ಪರಿಣಾಮ ಬೀಳಲಿದೆ ಎಂದು ಪ್ರಣಯ್​ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದೆ.

    ಇದನ್ನೂ ಓದಿ: VIDEO| ಕುಡಿಯುವ ನೀರಿನಲ್ಲಿ ಕಾಲು ತೊಳೆದವನ ಹೆಗಲೇರಿದ ಶನಿ…!

    ಬಾಲಾಸ್ವಾಮಿ ಅವರ ಅರ್ಜಿ ಪುರಸ್ಕರಿಸಿದ ನಲ್ಗೊಂಡ ವಿಶೇಷ ಪರಿಶಿಷ್ಟ ವರ್ಗ/ಪಂಗಡ ನ್ಯಾಯಾಲಯ, ಮಿರಿಯಾಲಗುಡ ಪೊಲೀಸ್​ ಠಾಣೆಗೆ ನಿರ್ದೇಶಕ ಆರ್​ಜಿವಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ಹೊರಡಿಸಿದೆ.

    ಕಳೆದ ಅಪ್ಪಂದಿರ ದಿನದಿಂದು ಆರ್​ಜಿವಿ “ಮರ್ಡರ್​” ಹೆಸರಿನ ಮುಂದಿನ ಚಿತ್ರದ ಪೋಸ್ಟರ್​ ಅನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಬರೆದುಕೊಂಡಿದ್ದ ವರ್ಮಾ, ಅಮೃತಾ ರಾವ್​ ಹಾಗೂ ಮಾರುತಿ ರಾವ್​ ಜೀವನಾಧಾರಿತ ಚಿತ್ರವು ಒಂದು ಮನಕಲಕುವ ಕತೆಯಾಗಲಿದೆ. ಮಗಳನ್ನು ತುಂಬಾ ಪ್ರೀತಿಸುವ ತಂದೆಯ ಅಪಾಯಕಾರ ಸಾಹಸಗಳು ಪ್ರೇಕ್ಷಕರ ಹೃದಯವನ್ನು ತಟ್ಟಲಿದೆ ಎಂದು ಅಪ್ಪಂದಿರ ದಿನದಂದೇ ಪೋಸ್ಟರ್​ ಬಿಡುಗಡೆ ಮಾಡಿ, ಸ್ಯಾಡ್​ ಫಾದರ್ಸ್​ ಡೇ ಎಂದು ಬರೆದುಕೊಂಡಿದ್ದರು.

    ಇದೊಂದು ನೈಜ ಘಟನೆಯ ಕುಟುಂಬ ಆಧಾರಿತ ಚಿತ್ರವಾಗಿದೆ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದ್ದು, ತಂದೆ ಮಗಳ ಪಾತ್ರಗಳನ್ನು ಪರಿಚಯಿಸಲಾಗಿತ್ತು. ಇದು ಅಮೃತಾ ಮತ್ತು ಮಾರುತಿ ರಾವ್​ ನಿಜ ಜೀವನಾಧಾರಿತ ಚಿತ್ರವಾಗಿದ್ದು, ಇದರಲ್ಲಿ ಮಾರುತಿ ರಾವ್, ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ತನ್ನ ಮಗಳ ಪತಿ ಪ್ರಣಯ್​ನನ್ನು ಕೊಲ್ಲಲು ಸುಪಾರಿ ನೀಡಿದ ಆಧಾರದ ಮೇಲೆ ಚಿತ್ರಕತೆ ಸಾಗಲಿದೆ.

    ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ ಯುವತಿಯ ಡೆತ್​ನೋಟ್​ನಲ್ಲಿತ್ತು ಪ್ರಿಯಕರನ ಹೆಸರು

    ಮಗಳ ಮೇಲಿನಾ ಅತಿಯಾದ ಪ್ರೀತಿಯೇ ಕೊಲೆಗೆ ಕಾರಣ ಎಂದು ವರ್ಮಾ ಹೇಳಿರುವದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಮಗಳ ಸೊಕ್ಕಿನ ವರ್ತನೆಯೇ ಕೊಲೆಗೆ ಪುಷ್ಠಿ ನೀಡಿದೆ ಎಂದು ವರ್ಮಾ ಸಮರ್ಥನೆ ನೀಡಿದ್ದು ನೆಟ್ಟಿಗರ ಕೋಪಕ್ಕೆ ಕಾರಣವಾಗಿತ್ತು.

    ನೆಟ್ಟಿಗರೊಬ್ಬರು ಟ್ವೀಟ್​ ಮಾಡಿ, ಮರ್ಯಾದೆ ಹತ್ಯೆಯ ಸ್ಟೋರಿಯನ್ನು ಅಪ್ಪ-ಮಗಳ ಪ್ರೀತಿಯ ಸಂಬಂಧವೆಂದು ಹೇಳಲು ವರ್ಮಾ ಹೊರಟಿದ್ದಾರೆ ಎಂದು ಟೀಕಿಸಿದ್ದರು. ಮತ್ತೊರ್ವ ನೆಟ್ಟಿಗ, ಇದೊಂದು ಮರ್ಯಾದೆ ಹತ್ಯೆ. ಸ್ಟೋರಿಯ ಎಳೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ ಎಂದು ವರ್ಮಾರನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಇನ್ನು ಸಿನಿಮಾ ವಿಮರ್ಶಕ ಸಂಕೀರ್ತನ ವರ್ಮಾ ಅವರು ಟ್ವೀಟ್​ ಮಾಡಿ, ಇದು ಖಂಡಿತ ಪ್ರೀತಿಯಲ್ಲ. ಇದೊಂದು ಜಾತಿಯ ವ್ಯಾಮೋಹದಿಂದ ಆದ ಮರ್ಯಾದೆ ಹತ್ಯೆ. ಇದೊಂದು ಪೂರ್ವ ನಿಯೋಜಿತ ರಕ್ತಸಿಕ್ತ ಕೊಲೆ. ಪ್ರಣಯ್ ವ್ಯಕ್ತಿತ್ವವನ್ನು ಕೊಲ್ಲಲು ಈ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಮೃತಾ ತಂದೆಯೊಂದಿಗಿನ ಸಂಬಂಧವನ್ನು ಬಹಿರಂಗವಾಗಿ ಕಡಿದ ನಂತರವೂ. ನೀವು ತಂದೆ-ಮಗಳ ನಡುವಿನ ಪ್ರೀತಿಯ ಬಗ್ಗೆ ಹೇಳ ಹೊರಟಿರುವುದು ನಾಚಿಕೆಗೇಡು ಎಂದು ಜರಿದಿದ್ದರು. ಹೀಗೆ ಸಾಕಷ್ಟು ಕಾಮೆಂಟ್​ಗಳು ವರ್ಮಾ ವಿರುದ್ಧ ಕೇಳಿಬಂದಿವೆ.

    ಇದನ್ನೂ ಓದಿ: PHOTOS| ಮತ್ತಷ್ಟು ಮಾದಕ ಫೋಟೋಗಳನ್ನು ಹರಿಬಿಟ್ಟು ಟ್ರೋಲಿಗರಿಗೆ ಟಾಂಗ್​ ಕೊಟ್ರಾ ಚಿತ್ರಾಲ್​?

    ಪ್ರಣಯ್​ ಹತ್ಯೆ ಹಿನ್ನೆಲೆ
    ಪ್ರಣಯ್​ ದಲಿತ ಸಮುದಾಯದವನಾಗಿದ್ದ, ಅಮೃತಾ ಪ್ರಭಾವಿ ವೈಶ್ಯ ಸಮುದಾಯವಳು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇದಕ್ಕೆ ಅಮೃತಾ ತಂದೆ ಮಾರುತಿ ರಾವ್​ ಒಪ್ಪಿರಲಿಲ್ಲ. ಬಳಿಕ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದರು ಎಂದು ಹೇಳಲಾಗಿದೆ. ಸೆಪ್ಟೆಂಬರ್​ 14, 2018ರಂದು ಗರ್ಭಿಣಿ ಪತ್ನಿಯ ಮುಂದೆ ಪ್ರಣಯ್​ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಆಸ್ಪತ್ರೆಯನ್ನು ಬಿಟ್ಟು ಬರುವಾಗ ಕೊಲೆ ಮಾಡಲಾಗಿತ್ತು. ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು. (ಏಜೆನ್ಸೀಸ್​)

    ಪ್ರಣಯ್​​ ಹತ್ಯೆ ಕತೆಯನ್ನು ಬೇರೆ ರೀತಿ ಬಿಂಬಿಸಲು ಹೊರಟ ಆರ್​ಜಿವಿಗೆ ನೆಟ್ಟಿಗರ ಛೀಮಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts