More

    ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್​ ಪೊಲೀಸ್​ ವಶಕ್ಕೆ; ಬಂಧಿಸಲು ಹೋದ ಇನ್​​ಸ್ಪೆಕ್ಟರ್​ ಮೇಲೆ ಹಲ್ಲೆ

    ಬೆಂಗಳೂರು: ಮೂರು ಕೊಲೆ, ಎರಡು ಕೊಲೆ ಯತ್ನ ಹಾಗೂ ದರೋಡೆ, ಕಳ್ಳತನ ಸೇರಿದಂತೆ ಒಟ್ಟು 15 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಳನಿ ಅಲಿಯಾಸ್​ ಕರ್ಚಿಪ್ ಪಳನಿ ಎಂಬ ಕುಖ್ಯಾತ ರೌಡಿಶೀಟರ್ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ರೌಡಿಶೀಟರ್​​ಗಳ ಮೇಲೆ ನಿಗಾ ಇಟ್ಟಿದ್ದರು. ಮಂಗಳವಾರ ಎಸಿಪಿ ಪರಮೇಶ್ವರ್​​ಗೆ ಅಶೋಕನಗರ ಬಳಿಯ ಸ್ಮಶಾನದಲ್ಲಿ ಪಳನಿ ಇರುವ ಬಗ್ಗೆ ಮಾಹಿತಿ ಬಂದಿತು. ಆತನನ್ನು ಬಂಧಿಸಲು ಎಸಿಪಿ ಹಾಗೂ ಇನ್​ಸ್ಪೆಕ್ಟರ್ ತಂಡ ತೆರಳಿತು. ಆತ ಶರಣಾಗದೇ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಎಸಿಪಿ ಪರಮೇಶ್ವರ್ ಶರಣಾಗುವಂತೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೆ ಪಳನಿ, ಸಿಸಿಬಿ ಪೊಲೀಸ್ ಇನ್​​ಸ್ಪೆಕ್ಟರ್ ಹರೀಶ್ ಕುಮಾರ್​​ ಮೇಲೆ ಡ್ಯಾಗರ್​​ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ. ಈ ವೇಳೆ ಆತನ ಕಾಲಿಗೆ ಎಸಿಪಿ ಪರಮೇಶ್ವರ್ ಒಂದು ಸುತ್ತು ಗುಂಡು ಹಾರಿಸಿ ಬಂಧಿಸಿದರು. ಸದ್ಯ ಗಾಯಾಳು ಇನ್​​ಸ್ಪೆಕ್ಟರ್ ಹರೀಶ್​ ಹಾಗೂ ಆರೋಪಿ ಪಳನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್​ ಪೊಲೀಸ್​ ವಶಕ್ಕೆ; ಬಂಧಿಸಲು ಹೋದ ಇನ್​​ಸ್ಪೆಕ್ಟರ್​ ಮೇಲೆ ಹಲ್ಲೆ
    ಹಲ್ಲೆಗೊಳಗಾದ ಇನ್​ಸ್ಪೆಕ್ಟರ್​ ಹರೀಶ್​​ಕುಮಾರ್​

    ಮತ್ತೊಬ್ಬ ಕುಖ್ಯಾತ ರೌಡಿಶೀಟರ್ ಬಬ್ಲಿಯ ಸಹಚರನಾಗಿದ್ದ ಪಳನಿ, 2013 ರಲ್ಲಿ ಆನೆಪಾಳ್ಯದಲ್ಲಿ ಲೋಕಿ ಎಂಬಾತನನ್ನ ಕೊಲೆಗೈದಿದ್ದ. ಕುಮಾರಸ್ವಾಮಿ‌ ಲೇಔಟ್ ಹಾಗೂ ಅಶೋಕನಗರ ಠಾಣೆಯ ರೌಡಿಶೀಟರ್ ಆಗಿದ್ದ ಈತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬೆಳ್ಳಂದೂರಿನಲ್ಲಿ ಮುನ್ನಾಕುಮಾರ್ ಎಂಬಾತನನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

    ವಿದ್ಯಾರ್ಥಿನಿ ಆತ್ಮಹತ್ಯೆ: ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕ, ಕ್ರಮ ಕೈಗೊಳ್ಳದ ಮುಖ್ಯಶಿಕ್ಷಕಿ ಬಂಧನ

    VIDEO| ಪದ್ಮಾಸನ ಮಾಡಲು ಸುಲಭ ವಿಧಾನ ಇಲ್ಲಿದೆ, ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts