ನವದೆಹಲಿ: ರೋಹಿತ್ ಶರ್ಮ ನಾಯಕತ್ವವನ್ನು ಕಸಿದು ಹಾರ್ದಿಕ್ ಪಾಂಡ್ಯಗೆ ನೀಡಿದ ಬಳಿಕ ಸಾಕಷ್ಟು ಪರ-ವಿರೋಧದ ಚರ್ಚೆಗೆ ಒಳಗಾಗುತ್ತಲೇ ಬಂದಿರುವ ತಂಡ ಮುಂಬೈ ಇಂಡಿಯನ್ಸ್. ಇದೀಗ ತಂಡ ಆರಂಭಿಕ 2 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಇದಕ್ಕೆ ತಂಡದಲ್ಲಿನ ಒಡಕು ಪ್ರಮುಖ ಕಾರಣವಾಗಿದೆ ಎಂದು ವರದಿಯಾಗಿದೆ.
ಮುಂಬೈ ತಂಡದಲ್ಲಿ ಹಾರ್ದಿಕ್-ರೋಹಿತ್ ಅವರ ಎರಡು ಬಣಗಳಿವೆ. ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರು ಹಾರ್ದಿಕ್ ಪಾಂಡ್ಯ ಬಣದಲ್ಲಿದ್ದರೆ, ರೋಹಿತ್ ಅವರ ಗುಂಪಿನಲ್ಲಿ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ ಮತ್ತಿತರರು ಇದ್ದಾರೆ ಎಂದು ಹಿಂದಿ ಪತ್ರಿಕೆಯೊಂದರ ವರದಿಯಲ್ಲಿ ತಿಳಿಸಲಾಗಿದೆ.
ಆಟಗಾರರಲ್ಲಿನ ನಿಷ್ಠೆಯಲ್ಲಿರುವ ವಿಭಜನೆಯೇ ತಂಡದ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತಿದೆ. ಹಾರ್ದಿಕ್ ಪಾಂಡ್ಯ ತಂಡದ ಅಭಿಮಾನಿಗಳಿಂದಲೂ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಮಾತ್ರವಲ್ಲದೆ, ಸ್ಟೇಡಿಯಂನಲ್ಲೂ ಹಾರ್ದಿಕ್ ನಿಂದನೆಗಳನ್ನು ಎದುರಿಸುತ್ತಿದ್ದಾರೆ. ಆದರೆ ತಂಡದ ಮಾಲೀಕರ ಬೆಂಬಲ ಈಗಲೂ ಹಾರ್ದಿಕ್ಗೆ ಇದೆ ಎಂದು ವಿವರಿಸಲಾಗಿದೆ.
ನವೆಂಬರ್ 22ರಿಂದ ಪ್ರತಿಷ್ಠಿತ ಬಾರ್ಡರ್-ಗಾವಸ್ಕರ್ ಟ್ರೋಫಿ; ಪರ್ತ್ನಲ್ಲಿ ಭಾರತ-ಆಸೀಸ್ ಮೊದಲ ಟೆಸ್ಟ್