More

    ಮಲೇಷಿಯಾದ ಥ್ರೋಬಾಲ್ ಸ್ಪರ್ಧೆಗೆ ಆಯ್ಕೆ

    ಮುಳಗುಂದ: ಅಂಗವಿಕಲರಾದ ಸಮೀಪದ ಸೊರಟೂರು ಗ್ರಾಮದ ಮೌನೇಶ ಮರಾಠೆ ಹಾಗೂ ರೋಣ ತಾಲೂಕಿನ ಗಾಡಗೋಳಿ ಗ್ರಾಮದ ಶರಣಯ್ಯ ಸಾಲಿಮಠ ಅವರು ಜುಲೈ 27ರಂದು ಮಲೇಷಿಯಾದಲ್ಲಿ ಜರುಗಲಿರುವ ಪ್ಯಾರಾ ಥ್ರೋಬಾಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಕ್ರೀಡಾ ಪ್ರತಿಭೆಗಳಿಗೆ ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳು ಸಹಾಯಹಸ್ತ ನೀಡಬೇಕು ಎಂದು ಯಲ್ಲಾಪುರ ಗ್ರಾಮದ ದೈಹಿಕ ಶಿಕ್ಷಣ ಶಿಕ್ಷಕ ಎಂ.ಐ. ಕನಕಿ ಹಾಗೂ ಶ್ರೀಕಾಂತ ಪೂಜಾರ ಮನವಿ ಮಾಡಿದ್ದಾರೆ.
    ಪಟ್ಟಣದಲ್ಲಿ ಮರಾಠೆ ಹಾಗೂ ಸಾಲಿಮಠ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಎಲೆಮರೆಯ ಕಾಯಿಯಂತೆ ಈ ಪ್ರತಿಭೆಗಳು ಇದ್ದಾರೆ. ರಾಜ್ಯದ ಹಲವಾರು ಕಡೆ ಭಾಗವಹಿಸಿ ಈಗ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿದ್ದಾರೆ. ಬಡ ಕುಟುಂಬದ ಈ ಪ್ರತಿಭೆಗಳಿಗೆ ಆರ್ಥಿಕವಾಗಿ ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ನೆರವು ನೀಡಬೇಕು ಎಂದು ತಿಳಿಸಿದರು.
    ಶಶಿಧರ ಬಂಗಾರಿ ಮಾತನಾಡಿ, ಸರ್ಕಾರದ ಸೌಲಭ್ಯಗಳು ಈ ಅಂಗವಿಕಲರಿಗೆ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿದ್ದರೂ ಅದು ಕಮರಿ ಹೋಗುವಂತಾಗಿದೆ ಎಂದರು. ನಿವೃತ್ತ ಶಿಕ್ಷಕ ಜೆ.ಎಂ. ನದಾಫ, ಗುರಪ್ಪ ಮುಳಗುಂದ, ಮಹಾಂತೇಶ ಪೂಜಾರ, ನಿಂಗರಡ್ಡಿ ತೇರಿನಗಡ್ಡಿ, ದಾದಾಸಾಬ್ ಹುಡೇದ, ಇಸ್ಮಾಯಿಲ್ ಕಾಗದ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts