More

    ದೇಗುಲದ ಮರು ನಿರ್ಮಾಣಕ್ಕೆ ಭೂಮಿಪೂಜೆ

    ಮಡಿಕೇರಿ: ಮುಕೋಡ್ಲುವಿನ ಆವಂಡಿ ಗ್ರಾಮದಲ್ಲಿ ಸುಮಾರು ಐದು ವರ್ಷಗಳ ಹಿಂದೆ ಮರಬಿದ್ದು ಹಾನಿಗೀಡಾಗಿದ್ದ ಪುರಾತನ ಶ್ರೀಕಾಟೋಳಪ್ಪ ದೇವಾಲಯದ ಮರು ನಿರ್ಮಾಣಕ್ಕೆ ಕಾಲ ಕೂಡಿ ಬಂದಿದ್ದು, ಭೂಮಿಪೂಜೆ ನೆರವೇರಿಸಲಾಯಿತು.
    ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ದೇವಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಕಾರ್ಕಳದ ಶಿಲ್ಪಿ ಮಣಿ ಅವರು ದೇವಾಲಯದ ಶಿಲ್ಪಕಾರ್ಯವನ್ನು ಕೈಗೊಂಡಿದ್ದು, ಏಪ್ರಿಲ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ.  ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಳ್ಳಲಿದ್ದು, ಸರ್ಕಾರದಿಂದ ಈಗಾಗಲೇ 18 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ. ಅನುದಾನ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ವೀಣಾಅಚ್ಚಯ್ಯ ಅವರ ಪ್ರಯತ್ನದ ಬಗ್ಗೆ ಗ್ರಾಮದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದರು.
    ತಕ್ಕ ಮುಖ್ಯಸ್ಥರಾದ ಹಂಚೆಟ್ಟಿರ ನಯನ ಚಂಗಪ್ಪ, ತಂಬುಕುತ್ತಿರ ಪೂವಯ್ಯ, ಕಾರ್ಯದರ್ಶಿ ಟಿ.ಎಂ.ಅಯ್ಯಪ್ಪ ಮತ್ತಿತರ ಪ್ರಮುಖರು ಹಾಗೂ ಗ್ರಾಮಸ್ಥರು ಭೂಮಿಪೂಜೆ ಸಂದರ್ಭ ಹಾಜರಿದ್ದರು.
    ಹುತ್ತವೇ ದೇವರು: ಯಾವುದೇ ವಿಗ್ರಹಗಳಿಲ್ಲದೆ ದೊಡ್ಡ ಹುತ್ತವನ್ನಷ್ಟೇ ಹೊಂದಿರುವುದು ಶ್ರೀಕಾಟೋಳಪ್ಪ ದೇವಾಲಯದ ವಿಶೇಷವಾಗಿದ್ದು, ಸುಮಾರು 62 ಎಕರೆ ಪ್ರದೇಶದ ದೇವರಕಾಡು ಸುತ್ತುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts