More

    ‘ಮುಗಿಲ್ ಪೇಟೆ’ಯ 100ಕ್ಕೂ ಅಧಿಕ ಜನರ ಖಾತೆಗೆ 5,000 ರೂ. ಟ್ರಾನ್ಸ್​ಫರ್; ಚಿತ್ರತಂಡದ ಮಂದಿಗೆ ನಿರ್ಮಾಪಕರ ‘ರಕ್ಷಾ’ ಕವಚ

    ಬೆಂಗಳೂರು: ಕರೊನಾ ಹಾವಳಿಯಿಂದ ತತ್ತರಿಸಿ ಹೋಗಿರುವವರಿಗೆ ಹಲವರು ತಮ್ಮದೇ ಆದ ರೀತಿಯಲ್ಲಿ ನಾನಾ ಸಹಾಯಗಳನ್ನು ಮಾಡುತ್ತಿದ್ದು ಇದಕ್ಕೆ ಚಿತ್ರರಂಗ ಕೂಡ ಹೊರತಾಗಿಲ್ಲ. ಈ ತೆರನಾದ ನೆರವಿನಲ್ಲಿ ಇದೀಗ ಹೊಸ ಸೇರ್ಪಡೆ ಎಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಅಭಿನಯದ ‘ಮುಗಿಲ್ ಪೇಟೆ’ ಸಿನಿಮಾ ತಂಡ.

    ಭರತ್ ಎಸ್​. ನಾವುಂದ ನಿರ್ದೇಶನದ ‘ಮುಗಿಲ್ ಪೇಟೆ’ ಚಿತ್ರದಲ್ಲಿ ಮನುರಂಜನ್ ರವಿಚಂದ್ರನ್​ ಹಾಗೂ ಖಯಾದು ಲೋಹರ್ ನಾಯಕ-ನಾಯಕಿಯಾಗಿ ಅಭಿನಯಿಸಿದ್ದು, ಈ ಚಿತ್ರಕ್ಕೆ ನಿರ್ಮಾಪಕಿ ರಕ್ಷಾ ವಿಜಯಕುಮಾರ್ ಬಂಡವಾಳ ಹೂಡಿದ್ದಾರೆ. ಕರೊನಾ ಹಾವಳಿ ಮಧ್ಯೆ ಚಿತ್ರರಂಗದ ಚಟುವಟಿಕೆಯೇ ಬಹುತೇಕ ಸ್ಥಗಿತಗೊಂಡಿದ್ದು, ಬಹಳಷ್ಟು ಕಲಾವಿದರು, ತಾಂತ್ರಿಕ ವರ್ಗದವರು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಡುವೆ ನಮ್ಮ ಸಿನಿಮಾ ತಂಡಕ್ಕೆ ಏನಾದರೂ ಸಹಾಯ ಮಾಡಬೇಕು ಎಂದು ಮುಂದಾಗಿರುವ ನಿರ್ಮಾಪಕರು, ಚಿತ್ರತಂಡದ ನೂರಕ್ಕೂ ಅಧಿಕ ಮಂದಿಗೆ ನಗದು ರವಾನಿಸಿ ಅವರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ.

    ಇದನ್ನೂ ಓದಿ: ಒಟಿಟಿಯಲ್ಲಿ ಪ್ರಣೀತಾ ಹಂಗಾಮಾ; ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಚೊಚ್ಚಲ ಬಾಲಿವುಡ್ ಚಿತ್ರ

    ‘ಮುಗಿಲ್ ಪೇಟೆ’ ಚಿತ್ರತಂಡದ ನೂರಕ್ಕೂ ಹೆಚ್ಚು ಮಂದಿಯ ಖಾತೆಗೆ ತಲಾ 5,000 ರೂ. ಟ್ರಾನ್ಸ್​ಫರ್​ ಮಾಡಿಸಿರುವ ರಕ್ಷಾ ವಿಜಯಕುಮಾರ್​ ತಮ್ಮ ತಂಡದ ಸದಸ್ಯರಿಗೆ ಅಭಯ ನೀಡಿದ್ದಾರೆ. ನಿರ್ಮಾಪಕರ ಈ ನೆರವಿನ ಕಾರ್ಯಕ್ಕೆ ನಾಯಕ ನಟ ಮನುರಂಜನ್ ಕೂಡ ಕೈಜೋಡಿಸಿದ್ದಾರೆ. ತಂಡದ ಎಲ್ಲರೂ ಮನೆಯಲ್ಲೇ ಇದ್ದು ಜಾಗರೂಕತೆ ವಹಿಸಬೇಕು ಎಂದು ನಾಯಕ, ನಿರ್ಮಾಪಕ, ನಿರ್ದೇಶಕರು ವಿನಂತಿಸಿಕೊಂಡಿದ್ದಾರೆ.

    'ಮುಗಿಲ್ ಪೇಟೆ'ಯ 100ಕ್ಕೂ ಅಧಿಕ ಜನರ ಖಾತೆಗೆ 5,000 ರೂ. ಟ್ರಾನ್ಸ್​ಫರ್; ಚಿತ್ರತಂಡದ ಮಂದಿಗೆ ನಿರ್ಮಾಪಕರ 'ರಕ್ಷಾ' ಕವಚ
    ಮನುರಂಜನ್, ಭರತ್ ನಾವುಂದ, ಖಯಾದು ಮತ್ತಿತರರು.

    ‘ನಾನು ಉಪೇಂದ್ರ, ಮುಖ್ಯಮಂತ್ರಿ ಆಗ್ಬೇಕು, ನೀವು ಗೆಲ್ಲಿಸ್ತೀರಾ? ಎಲ್ಲಾ ಕೆಲ್ಸ ಪಾರದರ್ಶಕತೆಯಿಂದ ಮಾಡ್ತೇನೆ’

    ಸ್ನೇಹಿತನೊಂದಿಗೆ ಅಫೇರ್​: ಸಂದರ್ಶನದಲ್ಲಿ ಕುತೂಹಲ ತೆರೆದಿಟ್ಟ ಬಹುಭಾಷಾ ನಟಿ ಪ್ರಿಯಾಮಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts