ಬೆಂಗಳೂರು: ಕರೊನಾ ಹಾವಳಿಯಿಂದ ತತ್ತರಿಸಿ ಹೋಗಿರುವವರಿಗೆ ಹಲವರು ತಮ್ಮದೇ ಆದ ರೀತಿಯಲ್ಲಿ ನಾನಾ ಸಹಾಯಗಳನ್ನು ಮಾಡುತ್ತಿದ್ದು ಇದಕ್ಕೆ ಚಿತ್ರರಂಗ ಕೂಡ ಹೊರತಾಗಿಲ್ಲ. ಈ ತೆರನಾದ ನೆರವಿನಲ್ಲಿ ಇದೀಗ ಹೊಸ ಸೇರ್ಪಡೆ ಎಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಅಭಿನಯದ ‘ಮುಗಿಲ್ ಪೇಟೆ’ ಸಿನಿಮಾ ತಂಡ.
ಭರತ್ ಎಸ್. ನಾವುಂದ ನಿರ್ದೇಶನದ ‘ಮುಗಿಲ್ ಪೇಟೆ’ ಚಿತ್ರದಲ್ಲಿ ಮನುರಂಜನ್ ರವಿಚಂದ್ರನ್ ಹಾಗೂ ಖಯಾದು ಲೋಹರ್ ನಾಯಕ-ನಾಯಕಿಯಾಗಿ ಅಭಿನಯಿಸಿದ್ದು, ಈ ಚಿತ್ರಕ್ಕೆ ನಿರ್ಮಾಪಕಿ ರಕ್ಷಾ ವಿಜಯಕುಮಾರ್ ಬಂಡವಾಳ ಹೂಡಿದ್ದಾರೆ. ಕರೊನಾ ಹಾವಳಿ ಮಧ್ಯೆ ಚಿತ್ರರಂಗದ ಚಟುವಟಿಕೆಯೇ ಬಹುತೇಕ ಸ್ಥಗಿತಗೊಂಡಿದ್ದು, ಬಹಳಷ್ಟು ಕಲಾವಿದರು, ತಾಂತ್ರಿಕ ವರ್ಗದವರು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಡುವೆ ನಮ್ಮ ಸಿನಿಮಾ ತಂಡಕ್ಕೆ ಏನಾದರೂ ಸಹಾಯ ಮಾಡಬೇಕು ಎಂದು ಮುಂದಾಗಿರುವ ನಿರ್ಮಾಪಕರು, ಚಿತ್ರತಂಡದ ನೂರಕ್ಕೂ ಅಧಿಕ ಮಂದಿಗೆ ನಗದು ರವಾನಿಸಿ ಅವರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಒಟಿಟಿಯಲ್ಲಿ ಪ್ರಣೀತಾ ಹಂಗಾಮಾ; ಡಿಸ್ನಿ ಹಾಟ್ಸ್ಟಾರ್ನಲ್ಲಿ ಚೊಚ್ಚಲ ಬಾಲಿವುಡ್ ಚಿತ್ರ
‘ಮುಗಿಲ್ ಪೇಟೆ’ ಚಿತ್ರತಂಡದ ನೂರಕ್ಕೂ ಹೆಚ್ಚು ಮಂದಿಯ ಖಾತೆಗೆ ತಲಾ 5,000 ರೂ. ಟ್ರಾನ್ಸ್ಫರ್ ಮಾಡಿಸಿರುವ ರಕ್ಷಾ ವಿಜಯಕುಮಾರ್ ತಮ್ಮ ತಂಡದ ಸದಸ್ಯರಿಗೆ ಅಭಯ ನೀಡಿದ್ದಾರೆ. ನಿರ್ಮಾಪಕರ ಈ ನೆರವಿನ ಕಾರ್ಯಕ್ಕೆ ನಾಯಕ ನಟ ಮನುರಂಜನ್ ಕೂಡ ಕೈಜೋಡಿಸಿದ್ದಾರೆ. ತಂಡದ ಎಲ್ಲರೂ ಮನೆಯಲ್ಲೇ ಇದ್ದು ಜಾಗರೂಕತೆ ವಹಿಸಬೇಕು ಎಂದು ನಾಯಕ, ನಿರ್ಮಾಪಕ, ನಿರ್ದೇಶಕರು ವಿನಂತಿಸಿಕೊಂಡಿದ್ದಾರೆ.
‘ನಾನು ಉಪೇಂದ್ರ, ಮುಖ್ಯಮಂತ್ರಿ ಆಗ್ಬೇಕು, ನೀವು ಗೆಲ್ಲಿಸ್ತೀರಾ? ಎಲ್ಲಾ ಕೆಲ್ಸ ಪಾರದರ್ಶಕತೆಯಿಂದ ಮಾಡ್ತೇನೆ’
ಸ್ನೇಹಿತನೊಂದಿಗೆ ಅಫೇರ್: ಸಂದರ್ಶನದಲ್ಲಿ ಕುತೂಹಲ ತೆರೆದಿಟ್ಟ ಬಹುಭಾಷಾ ನಟಿ ಪ್ರಿಯಾಮಣಿ