More

    ಚುನಾವಣೆಗೆ ಗ್ರಾಮಸ್ಥರ ಸಹಕಾರ ಅಗತ್ಯ

    ಮುಧೋಳ: ಗ್ರಾಮದಲ್ಲಿ ಮತದಾನವನ್ನು ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಉಪಚುನಾವಣಾಧಿಕಾರಿ ಸಿದ್ದಣ್ಣ ಸತ್ತಿಗೇರಿ ಹೇಳಿದರು.

    ತಾಲೂಕಿನ ಉತ್ತೂರ ಗ್ರಾಮದ ಮತಗಟ್ಟೆಗಳಿಗೆ ಶನಿವಾರ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿ, ಇಪ್ಪತ್ತೆರಡು ಸದಸ್ಯರನ್ನು ಒಳಗೊಂಡಿರುವ ಉತ್ತೂರ ಗ್ರಾಮ ಪಂಚಾಯಿತಿ ಚುನಾವಣೆ ಒಂದನೆಯ ಹಂತದಲ್ಲಿ ನಡೆಯಲಿದೆ. ತಾಲೂಕು ಚುನಾಣಾಧಿಕಾರಿ ಶಾಂತಿಯುತ ಚುನಾವಣೆ ನಡೆಸಲು ಚುರುಕಿನ ಕಾರ್ಯ ಕೈಗೊಂಡಿದ್ದು ಗ್ರಾಮಸ್ಥರ ಸಹಕಾರ ಅತ್ಯಗತ್ಯವೆಂದು ಹೇಳಿದರು.

    ಗ್ರಾಮದ ವಿವಿಧ ಪ್ರದೇಶಗಳಲ್ಲಿರುವ ಮತಕೇಂದ್ರಗಳನ್ನು ಪರಿಶೀಲಿಸಿದರು. ಸಹಾಯಕ ಚುನಾವಣಾಧಿಕಾರಿ ಎಂ.ಎಸ್. ಶಿಂಧೆ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಪ್ರಭು ಅಕ್ಕಿಮರಡಿ, ಸಂಗಮೇಶ ಬಣಕಾರ, ಬಿ.ಎ. ಪಾಟೀಲ, ವಿ.ಬಿ. ಚಿಚಖಂಡಿ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts