More

    ಸೂಕ್ಷ್ಮ ಪರೀಕ್ಷೆ ಕೇಂದ್ರಗಳಿಂದ ಡಿವೈಎಸ್ಪಿ, ಬಿಇಒ ಭೇಟಿ

    ಮುದ್ದೇಬಿಹಾಳ: ಕೋವಿಡ್-19 ಸಂದರ್ಭ ಜೂ.25 ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ವಿದ್ಯಾರ್ಥಿಗಳಲ್ಲಿ ಮೂಡಿರುವ ಭಯ ಹೋಗಲಾಡಿಸಿ ನಕಲು ಮುಕ್ತ ಪರೀಕ್ಷೆ ನಡೆಸಲು ಸರ್ವ ಸಿದ್ಧತೆಗಳನ್ನು ಶಿಕ್ಷಣ, ಪೊಲೀಸ್ ಇಲಾಖೆಯಿಂದ ಮಾಡಿಕೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಈ ಶಾಂತವೀರ ಹಾಗೂ ಪ್ರಭಾರ ಬಿಇಒ ಆರ್.ಸಿ. ಕಲಬುರ್ಗಿ ಹೇಳಿದರು.
    ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆಗಳನ್ನು ವಿವರಿಸಿದರು.
    ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯುಕ್ತರು, ಡಿಡಿಪಿಐ ಅವರು ಕರೆಯುವ ಪ್ರತಿ ಸಭೆಯಲ್ಲೂ ಮುದ್ದೇಬಿಹಾಳ ತಾಲೂಕಿನಲ್ಲಿ ಹಿಂದೆ ಪರೀಕ್ಷೆ ವೇಳೆ ಆಗಿ ಹೋದ ಘಟನೆ ನೆನಪಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ತಯಾರಾಗಿದ್ದಾರೆ ಎಂದರು.
    ಆರೋಗ್ಯ ಇಲಾಖೆಯ 13 ಶಿಕ್ಷಣ ಇಲಾಖೆಯಿಂದ ಪೂರೈಕೆಯಾಗಿರುವ 36 ಥರ್ಮಲ್ ಸ್ಕಾೃನರ್‌ಗಳು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಬಳಸಲಾಗುತ್ತಿದೆ. ಒಂದೊಂದು ಕೇಂದ್ರದಲ್ಲಿ ಎರಡೆರಡು ತಪಾಸಣೆ ಕೌಂಟರ್ ಇರಲಿವೆ. ಒಂದು ಡೆಸ್ಕ್‌ನಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ಸ್ಥಳಾವಕಾಶವಿದ್ದರೆ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಯಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
    ತಾಲೂಕಿನ 81 ಪ್ರೌಢಶಾಲೆಗಳ ಒಟ್ಟು 5503 ವಿದ್ಯಾರ್ಥಿಗಳು 16 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸಲಿದ್ದಾರೆ. ತಾಳಿಕೋಟೆ ಹಾಗೂ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಎರಡು ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್‌ಗಳನ್ನು ಕಾಯ್ದಿರಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಕೇಂದ್ರಕ್ಕೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಸಿಪಿಐ ಆನಂದ ವಾಘಮೋಡೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ, ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಲ್. ಕರಡ್ಡಿ, ಇಸಿಒ ಎ.ಎಸ್. ಬಾಗವಾನ, ತಾಲೂಕು ನೊಡಲ್ ಅಧಿಕಾರಿ ಎಚ್.ಎ. ಮೇಟಿ ಇದ್ದರು.

    ಪ್ರತ್ಯೇಕ ಕೊಠಡಿ

    ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಕಂಟೆನ್ಮೆಂಟ್ ಜೋನ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ತೆರೆಯಲಾಗುತ್ತಿದ್ದು ಕೊಠಡಿಯ ಗುರುತು ಯಾವುದೇ ಕಾರಣಕ್ಕೂ ಬಹಿರಂಗಗೊಳಿಸುವುದಿಲ್ಲ.ತಾಲೂಕಿನ ಒಂಭತ್ತು ಕಂಟೆನ್ಮೆಂಟ್ ಜೋನ್‌ಗಳಲ್ಲಿ 56 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಅಕಾರಿಗಳು ಮಾಹಿತಿ ನೀಡಿದರು.

    ಪರೀಕ್ಷೆ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ

    ತಾಲೂಕಿನ ರಕ್ಕಸಗಿ, ಬ. ಸಾಲವಾಡಗಿ, ಬಳಬಟ್ಟಿ, ಢವಳಗಿ ಹಾಗೂ ವಿಬಿಸಿ ಹೈಸ್ಕೂಲ್ ಪರೀಕ್ಷೆ ಕೇಂದ್ರಗಳನ್ನು ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದ್ದು, ಕಾಂಪೌಂಡ್ ಇಲ್ಲದ ಶಾಲೆಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗುವುದೆಂದು ವಿಬಿಸಿ ಪ್ರೌಢಶಾಲೆಗೆ ಭೇಟ ನೀಡಿದ್ದ ವೇಳೆ ಡಿವೈಎಸ್‌ಪಿ ಈ. ಶಾಂತವೀರ, ಪ್ರಭಾರ ಬಿಇಒ ಆರ್.ಸಿ. ಕಲ್ಬುರ್ಗಿ ತಿಳಿಸಿದರು.

    ಮುದ್ದೇಬಿಹಾಳ, ಬ.ಬಾಗೇವಾಡಿ ತಾಲೂಕಿಗೆ ಎರಡು ಡಿ.ಆರ್. ಸಿಬ್ಬಂದಿ ಒದಗಿಸುವಂತೆ ಮೇಲಧಿಕಾರಿಗಳಲ್ಲಿ ವಿನಂತಿಸಲಾಗಿದೆ. ಮುದ್ದೇಬಿಹಾಳ ತಾಲೂಕಿಗೆ ಒಟ್ಟು 70 ಪೊಲೀಸರು ಪರೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪೊಲೀಸರೇ ನಕಲು ಪೂರೆಸುವ ಆಪಾದನೆಳಿಗೆ ಗುರಿಯಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಎಚ್ಚರಿಕೆಯಿಂದ ಪರೀಕ್ಷೆ ಕಾರ್ಯ ನಿರ್ವಹಿಸುವಂತೆ ನಮ್ಮ ಪೊಲೀಸರಿಗೆ ಸೂಚನೆ ನೀಡಿದ್ದೇವೆ.
    ಈ. ಶಾಂತವೀರ, ಡಿವೈಎಸ್‌ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts