ಮುದ್ದೇಬಿಹಾಳ: ಮುದ್ದೇಬಿಹಾಳ ಘಟಕದ ಸಾರಿಗೆ ಇಲಾಖೆಯ ಮಂಗಳೂರು-ಮುದ್ದೇಬಿಹಾಳ ಮಾರ್ಗದ ಬಸ್ನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಹಣ, ಚಿನ್ನ ಇದ್ದ ಬ್ಯಾಗ್ ಮರಳಿಸುವ ಮೂಲಕ ಚಾಲಕ, ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಬಸ್ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದ ಕೆರೂರ ಸಮೀಪದ ಜಮ್ಮನಕಟ್ಟಿಯ ಬಸವರಾಜ ಮರಿಯಪ್ಪ ಕಬ್ಬಲಗೇರಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ತಾಯಿ ಹಾಗೂ ನಾನು ಕುಂದಾಪುರದಿಂದ ಜಮ್ಮನಕಟ್ಟಿಗೆ ಹೋಗಲೆಂದು ಮಂಗಳೂರು- ಮುದ್ದೇಬಿಹಾಳ ಬಸ್ ಹತ್ತಿಕೊಂಡಿದ್ದೇವು. ಕೌಟುಂಬಿಕ ಸಮಸ್ಯೆಯಿಂದಾಗಿ ಅವಸರವಾಗಿ ಕೆರೂರಿನಲ್ಲಿ ಬ್ಯಾಗ್ ಬಿಟ್ಟು ಇಳಿದಿದ್ದೇವು. ಬಳಿಕ ಬ್ಯಾಗ್ ಬಿಟ್ಟು ಹೋಗಿದ್ದ ಬಗ್ಗೆ ಟಿಕೆಟ್ ಹಿಂದೆ ಇದ್ದ ಸಹಾಯವಾಣಿಗೆ ಕರೆ ಮಾಡಿದಾಗ ಮುದ್ದೇಬಿಹಾಳ ಡಿಪೋ ಸಂಪರ್ಕಿಸಲು ತಿಳಿಸಿದರು. ಅಷ್ಟರಲ್ಲಾಗಲೇ ಬಸ್ ನಿರ್ವಾಹಕ, ಚಾಲಕರು ಕರೆ ಮಾಡಿ ಬ್ಯಾಗ್ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡಿದರು. ಬ್ಯಾಗ್ನಲ್ಲಿದ್ದ ವಸ್ತುಗಳು, ಚಿನ್ನ, ಹಣ ಸುರಕ್ಷಿತವಾಗಿದ್ದು, ಸಾರಿಗೆ ಇಲಾಖೆ ನೌಕರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಬಸ್ ನಿರ್ವಾಹಕ ಬಿ.ಎಸ್. ಬಿರಾದಾರ, ಚಾಲಕರಾದ ಅಶೋಕ ಧರಿಗೌಡರ, ಪಿ.ಎಸ್.ಹೆಳವರ ಅವರು, ಬಸ್ನಲ್ಲಿ ಬ್ಯಾಗ್ ಬಿಟ್ಟು ಕೆರೂರಿನಲ್ಲಿ ಇಳಿದಿದ್ದ ಪ್ರಯಾಣಿಕರಿಗೆ ಮೇಲಧಿಕಾರಿಗಳ ಮಾರ್ಗದರ್ಶನದ ಸೂಚನೆ ಮೇರೆಗೆ ಕರೆ ಮಾಡಿ ಮಾಹಿತಿ ನೀಡಿ ಬ್ಯಾಗ್ ಒಪ್ಪಿಸಿದ್ದೇವೆ ಎಂದರು.
ಸಿಬ್ಬಂದಿ ಮೇಲ್ವಿಚಾರಕ ಬಾಪುಗೌಡ ಪಾಟೀಲ, ಸಿಬ್ಬಂದಿ ಎಚ್.ಡಿ. ಪತ್ತಾರ, ಎನ್.ಆರ್. ಶಿವಳ್ಳಿ, ಬಸವರಾಜ ಬೇನಾಳ, ಆರ್.ಎಂ. ಮುದ್ದೇಬಿಹಾಳ ಮೊದಲಾದವರು ಇದ್ದರು.
ಹಣ, ಚಿನ್ನ ಇದ್ದ ಬ್ಯಾಗ್ ಮರಳಿಸಿದ ಸಾರಿಗೆ ನೌಕರರು

You Might Also Like
ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping
sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…
ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water
coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…
ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife
Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…