ಕಂಪ್ಲಿ: ಪಟ್ಟಣದಲ್ಲಿ ಮುದ್ದಾಪುರ ಅಗಸಿಯ ಸಣ್ಣ ಮಸೀದಿ ಸಮಿತಿ ಮೊಹರಂನಲ್ಲಿ ಹಬ್ಬದಲ್ಲಿ ಭಾವೈಕ್ಯತೆ ಸಾರುವ ಮುಜಾವರ್ಗಳಿಗೆ ವಸ್ತ್ರದಾನ, ಸ್ಮನಾನ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಂಡಿತ್ತು. ಪಟ್ಟಣ ಸೇರಿ ನಂ.10ಮುದ್ದಾಪುರ, ಜೋಗ ಗ್ರಾಮಗಳ 75ಕ್ಕೂ ಅಧಿಕ ಮುಜಾವರ್ಗಳನ್ನು ಗೌರವಿಸಲಾಯಿತು.
ಅನ್ನಸಂತರ್ಪಣೆ ಕಾರ್ಯಕ್ರಮ
ಮುಸ್ಲಿಂಧರ್ಮಗುರುಗಳಾದ ಸೈಯ್ಯದ್ಷಾಹ್ ಅಬುಲ್ಹಸನ್ಖಾದ್ರಿ ಸಾಹೇಬ್ ಸಜ್ಜಾದೆ ನಶೀನ್ ದಿವಾನಾಖಾನ, ಸೈಯ್ಯದ್ಷಾಹ್ ಡಾ.ನೂರ್ಅಹ್ಮದ್ಖಾದ್ರಿ ಇರಾದಾರ್ ಸಜ್ಜಾದೆ ನಶೀನ್ ಕನ್ಕಾಲ್, ಸೈಯ್ಯದ್ಷಾಹ್ ಖಾಜಾಮೈನುದ್ದೀನ್ ಲೌಬಾಲಿ ಸಜ್ಜಾದೆನಶೀನ್ ಮುದ್ದಾಪುರ ಅಗಸಿ, ಸೈಯ್ಯದ್ಷಾಹ್ ಆಜೀಮ್ಪಾಷ ಖಾದ್ರಿ ಸಾಹೇಬ್ ಚಿಕ್ಕಜಂತಕಲ್ ಇವರು ಸಾನ್ನಿಧ್ಯವಹಿಸಿದ್ದರು. ಸಣ್ಣ ಮಸೀದಿಯ ಕಮಿಟಿ ಸದಸ್ಯರಾದ ವಾಲ್ಮೀಕಿ ಈರಣ್ಣ, ಕೆ.ಸಣ್ಣಮೂರ್ತಿ, ಸೋಮನಾಥ, ರಾಜಪ್ಪ, ಬೂದಗುಂಪಿ ಹುಸೇನ್ಸಾಬ್, ಜಂಗಾ ಈರೇಶ್, ಖಾಲಿಚೀಲಮಾಬು, ಮಂಜು, ಸುನೀಲ್, ಬಾಷಾ, ಜಾಫರ್, ಬಿ.ಕೆ.ಬಾಬು, ಬಂಕದ ದೊಡ್ಡಬಸಪ್ಪ ಇತರರಿದ್ದರು.
ಇದನ್ನೂ ಓದಿ: ಗಂಡ-ಹೆಂಡತಿ ನಡುವೆ ಜಗಳ: ಸಮಸ್ಯೆ ಪರಿಹಾರಕ್ಕೆ ಜ್ಯೋತಿಷಿ ಮೊರೆ ಹೋದವರಿಗೆ ಕಾದಿತ್ತು ಶಾಕ್!