More

    ಪ್ರತಿಯೊಬ್ಬರೂ ಶಾಂತಿ-ಸೌಹಾರ್ದದಿಂದ ಮೊಹರಂ ಹಬ್ಬ ಆಚರಿಸಲಿ

    ಹನುಮಸಾಗರ: ಹಿಂದು ಮತ್ತು ಮುಸ್ಲಿಂ ಸಮುದಾಯದವರ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಶಾಂತಿ- ಸೌಹಾರ್ದದಿಂದ ಆಚರಣೆ ಮಾಡಬೇಕು ಎಂದು ಪಿಎಸ್‌ಐ ಅಶೋಕ ಬೇವೂರು ಹೇಳಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿ-ಸಭೆಯಲ್ಲಿ ಮಾತನಾಡಿ, ಈ ಭಾಗದಲ್ಲಿ ಹಬ್ಬವನ್ನು ಎಲ್ಲ ಧರ್ಮದವರೂ ಸೇರಿಕೊಂಡು ಶಾಂತಿಯುತವಾಗಿ ಆಚರಣೆ ಮಾಡುತ್ತಾ ಬರುತ್ತಿದ್ದು, ಈ ವರ್ಷವೂ ಹಿಂದಿನಂತೆ ಹಬ್ಬ ಆಚರಿಸಬೇಕು. ಯಾರಾದರೂ ಶಾಂತಿ ಕದಡಲು ಯತ್ನಿಸಿದರೆ ಕೂಡಲೇ ಠಾಣೆಗೆ ಮಾಹಿತಿ ನೀಡಿ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.


    ಮುಖಂಡರಾದ ಮೈನುದ್ದಿನ್ ಖಾಜಿ, ಸೂಚಪ್ಪ ದೇವರಮನಿ, ತಿಮ್ಮನಗೌಡ ಪೊಲೀಸ್‌ಪಾಟೀಲ್, ಮರೇಗೌಡ ಬೋದುರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts