ಹನುಮಸಾಗರ: ಹಿಂದು ಮತ್ತು ಮುಸ್ಲಿಂ ಸಮುದಾಯದವರ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಶಾಂತಿ- ಸೌಹಾರ್ದದಿಂದ ಆಚರಣೆ ಮಾಡಬೇಕು ಎಂದು ಪಿಎಸ್ಐ ಅಶೋಕ ಬೇವೂರು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿ-ಸಭೆಯಲ್ಲಿ ಮಾತನಾಡಿ, ಈ ಭಾಗದಲ್ಲಿ ಹಬ್ಬವನ್ನು ಎಲ್ಲ ಧರ್ಮದವರೂ ಸೇರಿಕೊಂಡು ಶಾಂತಿಯುತವಾಗಿ ಆಚರಣೆ ಮಾಡುತ್ತಾ ಬರುತ್ತಿದ್ದು, ಈ ವರ್ಷವೂ ಹಿಂದಿನಂತೆ ಹಬ್ಬ ಆಚರಿಸಬೇಕು. ಯಾರಾದರೂ ಶಾಂತಿ ಕದಡಲು ಯತ್ನಿಸಿದರೆ ಕೂಡಲೇ ಠಾಣೆಗೆ ಮಾಹಿತಿ ನೀಡಿ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಮುಖಂಡರಾದ ಮೈನುದ್ದಿನ್ ಖಾಜಿ, ಸೂಚಪ್ಪ ದೇವರಮನಿ, ತಿಮ್ಮನಗೌಡ ಪೊಲೀಸ್ಪಾಟೀಲ್, ಮರೇಗೌಡ ಬೋದುರು ಇತರರಿದ್ದರು.