ಕಲಬುರಗಿ: ಅಫಜಲಪುರ ತಾಲೂಕಿನ ಸಾಗನೂರದಲ್ಲಿ ಸಂಸದ ಡಾ.ಉಮೇಶ್ ಜಾಧವ್ ಬಲಗೈ ಬಂಟನ ಕೊಲೆ.
ಸಾಗನೂರ ಗ್ರಾಮದ ಗಿರೀಶ್ ಚಕ್ರ ಕೊಲೆಗೀಡಾದ ವ್ಯಕ್ತಿ. ಇತ್ತೀಚೆಗೆ ಬಿಎಸ್ ಎನ್ ಎಲ್ (ಟ್ಯಾಕ್) ಸಲಹಾ ಸಮಿತಿಗೆ ನೇಮಕ ಮಾಡಿದ್ದ ಎಂಪಿ ಸಂಸದ ಡಾ.ಜಾಧವ್.
ಸಲಹಾ ಸಮಿತಿಗೆ ನೇಮಕ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವುದಾಗಿ ಹೇಳಿ ಜಮೀನಿಗೆ ಕರೆಸಿ ಕೊಲೆ ಮಾಡಿರುವ ಶಂಕೆ. ಕೊಲೆಗೂ ಮುನ್ನ ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರ್ ಹತ್ಯೆ.
ಸಾಗನೂರ ಗ್ರಾಮದ ಸಚಿನ್ ಮತ್ತು ಗ್ಯಾಂಗ್ ನಿಂದ ಕೊಲೆ ಶಂಕೆ. ದೇವಲಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.