ಚಿಕ್ಕಮಗಳೂರು: ಮಗಳನ್ನು ರಕ್ಷಿಸಲು ತಾಯಿ ಧಾವಿಸಿದ್ದರೂ ಬಳಿಕ ಅಮ್ಮ-ಮಗಳಿಬ್ಬರೂ ಪ್ರಾಣ ಕಳೆದುಕೊಂಡ ದುರಂತ ಸಂಭವಿಸಿದೆ. ಅದೃಷ್ಟವಶಾತ್ ಜತೆಗಿದ್ದ ಮಗ ಪಾರಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ದುರಂತ ಪ್ರಕರಣ ನಡೆದಿದೆ.
ಶೋಭಾ (40) ಮತ್ತು ಆಕೆಯ ಪುತ್ರಿ ವರ್ಷ (8) ಸಾವಿಗೀಡಾದವರು. ಜತೆಗಿದ್ದ ಮಗ ಚೇತನ್ ಪಾರಾಗಿದ್ದಾನೆ. ಚಿಕ್ಕಮಗಳೂರು ತಾಲೂಕಿನ ವಡ್ಡರಹಳ್ಳಿಯಲ್ಲಿ ಈ ಮೂವರು ಕೆರೆಯನ್ನು ದಾಟುತ್ತಿದ್ದಾಗ ಈ ಪ್ರಕರಣ ಸಂಭವಿಸಿದೆ.
ಮಗ-ಮಗಳೊಂದಿಗೆ ತಾಯಿ ದನ ಮೇಯಿಸಲು ಹೋಗಿದ್ದು, ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಡೆ ದಾಟಲು ಹೋಗಿದ್ದರು. ಈ ಸಂದರ್ಭದಲ್ಲಿ ಮಗಳು ಏಕಾಏಕಿ ನೀರಿನ ಪ್ರಮಾಣ ಹೆಚ್ಚಿರುವ ಕಡೆ ತೆರಳಿ ಸಿಲುಕಿಕೊಂಡಿದ್ದರಿಂದ ತಕ್ಷಣ ತಾಯಿ ರಕ್ಷಣೆಗೆ ಧಾವಿಸಿದ್ದಳು. ಆದರೆ ದುರದೃಷ್ಟವಶಾತ್ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್ ಮಾಡಲು ಮನವಿ