More

    ಪಂಜ, ಮುಲ್ಲಕಾಡು ಶಾಲೆಗೆ ಪ್ರಶಸ್ತಿ: ಯಕ್ಷಗಾನ ಕಲೆಯಾಧಾರಿತ ವಿದ್ಯಾರ್ಥಿ ಸಮ್ಮಿಲನ

    ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

    ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನದ ಯಕ್ಷರೂಪಕ ಸ್ಪರ್ಧೆಗಳಲ್ಲಿ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪಂಜದ ಮುರಾರ್ಜಿ ದೇಸಾಯಿ ವಸತಿ ಶಾಲಾ ತಂಡಗಳು ಪ್ರಥಮ ಪ್ರಶಸ್ತಿ ಪಡೆದಿವೆ.

    ಯಕ್ಷರೂಪಕ ಸ್ಪರ್ಧೆಯಲ್ಲಿ ರಾಕೇಶ್ ರೈ ಅಡ್ಕ ನೇತೃತ್ವದ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ತಂಡ ದಶಾವತಾರ ಆಖ್ಯಾನಕ್ಕೆ ಪ್ರಥಮ ಪ್ರಶಸ್ತಿ ಪಡೆಯಿತು. ದೀವಿತ್ ಎಸ್.ಕೆ.ಪೆರಾಡಿ ನೇತೃತ್ವದ ಗುರುಪುರ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ತಂಡ ಶ್ರೀ ರಾಮಾಯಣ ದರ್ಶನಂ ಆಖ್ಯಾನಕ್ಕೆ ದ್ವಿತೀಯ ಹಾಗೂ ಅಶ್ವತ್ ಮಂಜನಾಡಿ ನೇತೃತ್ವದ ಹರೇಕಳದ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ತಂಡ ಕ್ಷೀರಾಬ್ಧಿ ಮಥನ ಆಖ್ಯಾನಕ್ಕೆ ತೃತೀಯ ತಂಡ ಪ್ರಶಸ್ತಿ ಪಡೆಯಿತು.

    ಯಕ್ಷರೂಪಕ ಸ್ಪರ್ಧೆಯಲ್ಲಿ ಗಿರೀಶ್ ಗಡಿಕಲ್ಲು ನೇತೃತ್ವದ ಪಂಜ ಮುರಾರ್ಜಿ ದೇಸಾಯಿ ವಸತಿ ಶಾಲೆಯ ತಂಡ ವಿಶ್ವರೂಪ ಆಖ್ಯಾನಕ್ಕೆ ಪ್ರಥಮ ಪ್ರಶಸ್ತಿ ಪಡೆಯಿತು. ಅಶ್ವತ್ ಮಂಜನಾಡಿ ನೇತೃತ್ವದ ಮಂಚಿ ಕೊಲ್ನಾಡು ಸರ್ಕಾರಿ ಪ್ರೌಢಶಾಲೆಯ ತಂಡ ಲಕ್ಷ್ಮೀ ಸ್ವಯಂವರ ಆಖ್ಯಾನಕ್ಕೆ ದ್ವಿತೀಯ ಪ್ರಶಸ್ತಿ ಹಾಗೂ ದೀವಿತ್ ಎಸ್.ಕೆ.ಪೆರಾಡಿ ನೇತೃತ್ವದ ಗುರುಪುರ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ತಂಡ ಶ್ರೀ ಕೃಷ್ಣ ಲೀಲಾಮೃತಂ ಆಖ್ಯಾನಕ್ಕೆ ತೃತೀಯ ತಂಡ ಪ್ರಶಸ್ತಿ ಪಡೆಯಿತು.

    ವಿಜೇತ ತಂಡಗಳಿಗೆ ಪ್ರಥಮ 30 ಸಾವಿರ ರೂ., ದ್ವಿತೀಯ 20 ಸಾವಿರ ರೂ. ಹಾಗೂ ತೃತೀಯ 15 ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ರಕ್ಷಿತ್ ಶೆಟ್ಟಿ ಪಡ್ರೆ ನೇತೃತ್ವದ ಕಮ್ಮಾಜೆ ಮುರಾರ್ಜಿ ದೇಸಾಯಿ ವಸತಿ ಶಾಲೆ ತಂಡ 10 ಸಾವಿರ ನಗದು ಸಹಿತ ಶಿಸ್ತಿನ ತಂಡ ಪ್ರಶಸ್ತಿ ಪಡೆಯಿತು.
    ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿ.ಎ.ಸುದೇಶ್ ಕುಮಾರ್ ರೈ, ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ್, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರದೀಪ ಆಳ್ವ ಕದ್ರಿ, ಮಹಿಳಾ ಘಟಕದ ಅಧ್ಯಕ್ಷೆ ಆರತಿ ಆಳ್ವ ಉಪಸ್ಥಿತರಿದ್ದರು.

    ಯಕ್ಷರಂಗು ಮುಖವರ್ಣಿಕೆ ಸ್ಪರ್ಧೆ: 1.ಮಾನ್ಯಾ ಜೆ.ಭಂಡಾರಿ (ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ), 2.ಶ್ರಾವ್ಯಾ ಯು.(ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ), 3.ಸಾತ್ವಿಕ್(ಕಮ್ಮಾಜೆ ಮುರಾರ್ಜಿ ದೇಸಾಯಿ ವಸತಿ ಶಾಲೆ)

    ಶ್ಲೋಕ ಕಂಠಪಾಠ ಸ್ಪರ್ದೆ: 1.ಅಭಿನವ ಭಟ್ಟ ಎನ್.(ವಿಶ್ವಮಂಗಳ ಪ್ರೌಡಶಾಲೆ ಕೊಣಾಜೆ), 2.ಪ್ರಯಾಗ ಜಿ.ಕೊಟ್ಟಾರಿ(ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ದೇವಿನಗರ ತಲಪಾಡಿ), 3.ಸ್ಕಂದ ಪ್ರಸಾದ ಎ.(ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ, ಧರ್ಮತಡ್ಕ ಕಾಸರಗೋಡು)

    ಯಕ್ಷಲೇಖನ ಸ್ಪರ್ಧೆ: 1.ಸೌಜನ್ಯಾ(ಶ್ರೀ ಮುಜಿಲ್ನಾಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ), 2.ಅಸ್ಮಿ(ಜೈನ ಪ್ರೌಢಶಾಲೆ ಮೂಡುಬಿದಿರೆ), 3.ಸಾದ್ವಿ(ಡಾ.ರಾಮಣ್ಣ ಶೆಟ್ಟಿ ಮೆಮೊರಿಯಲ್ ಸ್ಕೂಲ್ ತೋಕೂರು)

    ಯಕ್ಷ ಸ್ವಗತ ಮಾತುಗಾರಿಕೆ: 1.ಸಂದೃತ್ ಶರ್ಮ(ಮಾರುತಿ ವಿದ್ಯಾಕೇಂದ್ರ ತುಮಕೂರು), 2.ಲಾವಣ್ಯ(ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳ), 3.ಚಿನ್ಮಯಕೃಷ್ಣ ಉಳಿತ್ತಾಯ(ಶಾರದಾ ಶುಭೋದಯ ವಿದ್ಯಾಲಯ ಮೂಡುಶೆಡ್ಡೆ)

    ಯಕ್ಷಜ್ಞಾನ ಪರೀಕ್ಷಾ ಪಂಥ: 1.ಸಾತ್ವಿ(ಮುರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ), 2. ಮೇಧಾ (ಜಿ.ಎಚ್.ಎಸ್.ವಳಕಾಡು), 3.ಸುಧನ್ವ ಕೆ.(ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿ ನಗರ)

    ಯಕ್ಷ ರಸಪ್ರಶ್ನೆ: 1.ಹಸ್ತ ಪಿ.ಸಿ ಮತ್ತು ಖುಷಿ(ಮುರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ), 2.ಆಶ್ರಿತಾ ಮತ್ತು ಸಾನ್ವಿಕಾ ದೇವಾಡಿಗ(ಎಸ್.ಎನ್.ವಿ. ಪ್ರೌಢಶಾಲೆ ಹರೇಕಳ ಹಿರಿಯಂಗಡಿ), 3.ಪ್ರಣೀತ್ ಜೆ. ಮತ್ತು ಕೌಶಿಕ್ ಶೆಟ್ಟಿ(ಮುರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts