ಮೊಳಕಾಲ್ಮೂರು: ತಾಲೂಕಿನ ಕೆ.ಕೆ.ಪುರದಲ್ಲಿ ವಾಸವಿರುವ 24 ಅಲೆಮಾರಿ ಕುಟುಂಬಕ್ಕೆ ಗುರುವಾರ ರಾಂಪುರ ಗ್ರಾಮ ಪಂಚಾಯಿತಿ ವತಿಯಿಂದ ತಲಾ 5 ಕೆ.ಜಿ. ಅಕ್ಕಿ, ತರಕಾರಿ ವಿತರಿಸಲಾಯಿತು.
ತಹಸೀಲ್ದಾರ್ ಎಂ.ಬಸವರಾಜ್, ತಾಪಂ ಇಒ ಪ್ರಕಾಶ್, ಕಂದಾಯ ಅಧಿಕಾರಿ ಗೋಪಾಲ್, ಪಿಡಿಒಗಳಾದ ಎನ್.ಪಾಪನಾಯಕ, ಕುಮಾರಸ್ವಾಮಿ, ಕಾರ್ಯದರ್ಶಿ ಗುಂಡಪ್ಪ. ವೆಡ್ಸ್ ಸಂಸ್ಥೆ ಕಾರ್ಯದರ್ಶಿ ಗಂಗಾಧರ, ಗ್ರಾಪಂ ಉಪಾಧ್ಯಕ್ಷ ಜಯಕುಮಾರ್, ಸದಸ್ಯರಾದ ರಮೇಶ್, ಡಿ.ಪೆನ್ನಯ್ಯ, ಪರಮೇಶ್ವರಪ್ಪ, ವಕೀಲ ಗಂಗಮೂರ್ತಿ ಇದ್ದರು.